ಸುಳ್ಯದ ರೋಟರಿ ಕ್ಲಬ್ ವತಿಯಿಂದ ಓಣಂ ಆಚರಣೆ….

ಸುಳ್ಯ: ಸುಳ್ಯದ ರೋಟರಿ ಕ್ಲಬ್ ವತಿಯಿಂದ ಓಣಂ ಹಬ್ಬದ ಆಚರಣೆಯು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಮಾಜಿ ಅಧ್ಯಕ್ಷ ರೊ. ರಾಮಚಂದ್ರ ಅವರು ಓಣಂ ಪೂಕಳಂನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಾಸ್ಕರನ್ ನಾಯರ್ ಅವರು, ಈಗ ಮಲಯಾಳಿಗರು ವಿಶ್ವದಾದ್ಯಂತ ಓಣಂ ಆಚರಿಸುತ್ತಿರುವುದನ್ನು ಕಾಣಬಹುದಾಗಿದೆ. ಮಹಾಬಲಿಯನ್ನು ನೆನಪಿಸುವ ಹಾಗೂ ಅವರ ಆಡಳಿತವನ್ನು ಜನರಿಗೆ ತಲುಪಿಸುವ ಹಬ್ಬವಾಗಿದೆ ಓಣಂ. ಓಣಂನಿಂದಾಗಿ ನಮ್ಮೆಲ್ಲರಲ್ಲಿ ಐಶ್ವರ್ಯ, ಸಮೃದ್ಧಿ, ನೆಮ್ಮದಿ ತುಂಬಿತುಳುಕಲಿ ಎಂದರು.
ರೊ.ಡಾ.ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಅಸಿಸ್ಟಂಟ್ ಗವರ್ನರ್ ರೊ. ಡಾ.ಕೇಶವ ಪಿ. ಕೆ., ರೊ.ದಯಾನಂದ ಆಳ್ವ, ರೊ.ಡಾ.ಗುರುರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರೊ.ಸನತ್ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button