ಸುಳ್ಯ- ಬಸ್ ಡಿಕ್ಕಿಯಾಗಿ ನಿವೃತ್ತ ಟೀಚರ್ ಮೃತ್ಯು…

ಸುಳ್ಯ: ಹಳೆಗೇಟು ಬಳಿ ಸರಕಾರಿ ಬಸ್ ಗುದ್ದಿ ನಿವೃತ್ತ ಟೀಚರ್ ಮೀನಾಕ್ಷಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಹಳೆಗೇಟು ವಿದ್ಯಾನಗರದ ಬಳಿ ರಿಕ್ಷಾದಿಂದ ಇಳಿದು ಪತಿ ಹರಿಪ್ರಸಾದ್ ಅವರೊಂದಿಗೆ ರಸ್ತೆ ದಾಟುತ್ತಿದ್ದಾಗ ಪೈಚಾರು ಕಡೆಯಿಂದ ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ರಸ್ತೆಗೆ ಬಡಿದು ತಲೆ ಒಡೆದು ಮೀನಾಕ್ಷಿ ಟೀಚರ್ ಸ್ಥಳದಲ್ಲೇ ಮೃತಪಟ್ಟರು.
ಮೃತರು ಪತಿ, ಪುತ್ರ, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button