ಸುಳ್ಯ ಶ್ರೀರಾಮ ಭಜನಾ ಮಂದಿರದಲ್ಲಿ ಏಕಾಹ ಭಜನೆ….

ಸುಳ್ಯ: ಸುಳ್ಯ ಶ್ರೀರಾಮಪೇಟೆಯ ಶ್ರೀರಾಮ ಭಜನಾ ಮಂದಿರದಲ್ಲಿ ವರ್ಷ೦ಪ್ರತಿ ನಡೆಯುವ ಏಕಾಹ ಭಜನೆ ಇಂದು ಬೆಳಗ್ಗೆ ಆರಂಭಗೊಂಡಿದೆ. ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ರವರು ದೀಪಪ್ರಜ್ವಲನ‌ ಮಾಡುವುದರ ಮೂಲಕ ಚಾಲನೆ ನೀಡಿದರು. ಪುರೋಹಿತ ನಾಗರಾಜ ಭಟ್ಟರ ಪೌರೋಹಿತ್ಯದಲ್ಲಿ ವಿಶೇಷ ಪೂಜೆಗಳು ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಬೆಳಗ್ಗಿನಿಂದ ನಾಳೆ ಬೆಳಗ್ಗಿನ ತನಕ ನಡೆಯಲಿರುವ ಈ ಏಕಾಹ ಭಜನೆಯಲ್ಲಿ ತಾಲೂಕಿನ ಹಲವು ಭಜನಾ ತಂಡಗಳು ಭಜನಾ ಸೇವೆ ನೀಡಲಿದ್ದಾರೆ. ಸಂಜೆ ನಗರದ ವಿವಿಧ ಕಡೆಗಳಿಂದ ಉಲುಪೆ ಸೇವೆ ಮಂದಿರಕ್ಕೆ ಬರಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button