ಸುಳ್ಯ-ಹೊಳೆಗೆ ಬಿದ್ದು ಯುವಕ ನೀರುಪಾಲು….

ಸುಳ್ಯ: ಉಬರಡ್ಕದ ಹೊಳೆಯಲ್ಲಿ ಸ್ನಾನ ಮಾಡಲೆಂದು ತೆರಳಿದ್ದ ವಿದ್ಯಾರ್ಥಿಯೋರ್ವ ನೀರು ಪಾಲಾದ ದುರಂತ ಘಟನೆ ಸಂಭವಿಸಿದೆ.
ಉಬರಡ್ಕದ ಕಮೀಲಡ್ಕ ಮನೆಯ ಹರೀಶ್ ಎಂಬವರ ಪುತ್ರ ಯಶ್ವಿತ್ (16 ) ಮೃತ ದುರ್ದೈವಿ ಬಾಲಕ.ನಾಲ್ವರು ಸ್ನೇಹಿತರು ಭಾನುವಾರ ಮಧ್ಯಾಹ್ನ ವೇಳೆ ಕಂದಡ್ಕ ಹೊಳೆಗೆ ಸ್ನಾನಕ್ಕೆಂದು ಇಳಿದಿದ್ದರು. ಈ ವೇಳೆ ಕಿರಣ್ ಎಂಬಾತ ನೀರಲ್ಲಿ ಮುಳುಗುತಿದ್ದ ಸಂದರ್ಭ ಯಶ್ವಿತ್ ಮತ್ತು ಇತರ ಇಬ್ಬರು ಸೇರಿ ಆತನನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಆದರೆ ಈ ವೇಳೆ ಯಶ್ವಿತ್ ನೀರಿನ ಆಳಕ್ಕೆ ಬಿದ್ದ‌ ಎನ್ನಲಾಗಿದೆ. ಗೆಳೆಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರು ಸೇರಿ ಸಂಜೆ ವೇಳೆ ಮೃತದೇಹ ಮೇಲಕ್ಕೆತ್ತಿದ್ದಾರೆ. ಮೃತ ಬಾಲಕ ಸುಳ್ಯ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದನು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button