ಹದಿಹರೆಯದ ಸಮಸ್ಯೆಯ ಮಾಹಿತಿ – ಕಾನೂನು ಸಲಹೆ….

ಬಂಟ್ವಾಳ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಂಟ್ವಾಳ ಟೌನ್ ರೋಟರಿ ಕ್ಲಬ್ ಮತ್ತು ಬಂಟ್ವಾಳ ಆ್ಯನ್ಸ್ ಕ್ಲಬ್ ಸಹಯೋಗದೊಂದಿಗೆ ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳ ಕುರಿತು ಮಾಹಿತಿ ಹಾಗೂ ಸಂವಾದ ಮತ್ತು ಕಾನೂನು ಸಲಹೆ ಕಾರ್ಯಕ್ರಮ ನಡೆಯಿತು.
ಶಾಲಾ ಆಡಳಿತಾಧಿಕಾರಿಯಾದ ಸಿ. ಶ್ರೀಧರ್ ಅಧ್ಯಕ್ಷತೆಯನ್ನು ವಹಿಸಿದ್ದರು.ಸಂಪನ್ಮೂಲ ವ್ಯಕ್ತಿ ಸುರೇಶ್ ನಾವೂರರವರು ಕಾನೂನಿನ ಚೌಕಟ್ಟಿನ ಒಳಗೆ ಬದುಕುವ. ಕಾನೂನನ್ನು ಮುರಿಯುವ ಕೆಲಸ ಬೇಡ ಎಂದರು. ಕಾನೂನಿನ ಬಗ್ಗೆ ಅರಿವು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭ ಪ್ರಸೂತಿ ತಜ್ಞೆ ಡಾ| ಭಾರತಿ ಶೆಟ್ಟಿ ಅವರು ಮಾತನಾಡಿ ಹದಿಹರೆಯ ನಮ್ಮ ಜೀವನದ ಪ್ರಮುಖ ಘಟ್ಟ ಎಂದರು. 6ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹದಿಹರೆಯದ ಹೆಣ್ಣು ಮಕ್ಕಳ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಕುರಿತು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 195 ವಿದ್ಯಾರ್ಥಿಗಳು ಹಾಗೂ 151 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಬಂಟ್ವಾಳ ಆ್ಯನ್ಸ್ ಕ್ಲಬ್ ಅಧ್ಯಕ್ಷೆ ವಿಂಧ್ಯ ಎಸ್.ರೈ , ರೋಟರಿ ಕ್ಲಬ್ ಅಧ್ಯಕ್ಷರಾದ ಜಯರಾಜ್ ಬಂಗೇರ , ಕೋಶಾಧಿಕಾರಿ ಶ್ವೇತ ಶೆಟ್ಟಿ , ಶಾಲಾ ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ ವಿ ಶೆಟ್ಟಿ, ಗ್ರೇಸ್ ಪಿ.ಸಲ್ಡಾನ, ಶಾಲಾ ಇಂಟರ್ ಆ್ಯಕ್ಟ್ ಕ್ಲಬ್ನ ಅಧ್ಯಕ್ಷೆ ಸಂಜನಾ ಎಸ್ ರೈ ಉಪಸ್ಥಿತರಿದ್ದರು. ಸುಧಾ ಎನ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button