18ನೇ ವರ್ಷದ ಹೇಮಂತ ಕುಮಾರ್ ಸಂಸ್ಮರಣಾ ಕಾರ್ಯಕ್ರಮ…..

ಪುತ್ತೂರು: 2001 ಸೆಪ್ಟೆಂಬರ್ 11ರಂದು ನಡೆದ ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ಪುತ್ತೂರಿನ ದಿ. ಹೇಮಂತ ಕುಮಾರ್ ಅವರ 18ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮಂಗಳವಾರ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಹೇಮಂತ ಕುಮಾರ್ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಮತ್ತು ದಿ. ಹೇಮಂತ್ ಕುಮಾರ್ ಸ್ಮಾರಕ ಸಮಿತಿಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಪೂಜೆ ನೇರವೇರಿಸಲಾಯಿತು. ಬಳಿಕ ಹೇಮಂತ ಕುಮಾರ್ ಸಂಸ್ಮರಣೆಯನ್ನು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಹೇಮಂತ ಕುಮಾರ್ ತೈಲಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹೇಮಂತ ಕುಮಾರ್ ತಂದೆ ಪಿ ಆನಂದ ಟೈಲರ್, ತಾಯಿ ಪಿ ಕುಸುಮ, ಸಹೋದರ ಪ್ರಶಾಂತ್ ಕುಮಾರ್, ಶ್ವೇತಾ ಪ್ರಶಾಂತ್, ಶ್ರುಶಾಂತ್. ಬೇಬಿ ಶ್ರೀಯಾ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾರ್ಯನಿರ್ವಹಣಾಧಿಕಾರಿ ಆರ್ ಸಿ ನಾರಾಯಣ ರೆಂಜ, ಬಿಲ್ಲವ ಸಂಘದ ಕಾರ್ಯದರ್ಶಿ ಶಶಿಧರ ಕಿನ್ನಿಮಜಲು, ಕೋಶಾಧಿಕಾರಿ ನಾಗೇಶ ಬಲ್ನಾಡು, ಉಪಾಧ್ಯಕ್ಷೆ ವಿನಯ ವಸಂತ್, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಶೇಷಪ್ಪ ಬಂಗೇರ, ಅವಿನಾಶ್ ಹಾರಾಡಿ, ಬಾಬು ಪೂಜಾರಿ, ಸದಾನಂದ, ಕೇಶವ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button