ಸುಳ್ಯ ತಾಲೂಕು ಎನ್ ಎಸ್ ಯು ಐ ನ ಪ್ರಧಾನ ಕಾರ್ಯದರ್ಶಿಯಾಗಿ ಪಿ ಯು ಉಬೈಸ್ ಗೂನಡ್ಕ ನೇಮಕ…

ಸುಳ್ಯ: ಪಿ ಯು ಉಬೈಸ್ ಗೂನಡ್ಕ ಇವರನ್ನು ಎನ್ ಎಸ್ ಯು ಐ ನ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಮತ್ತು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ ಗೂನಡ್ಕ ರವರ ಶಿಫಾರಸಿನ ಮೇರೆಗೆ ಎನ್ ಎಸ್ ಯು ಐ ತಾಲೂಕು ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ನೇಮಕಗೊಳಿಸಿದ್ದಾರೆ.
ಇವರು ಗೂನಡ್ಕದ ಹಿರಿಯ ಸಾಮಾಜಿಕ ಧುರೀಣ, ಪಾಪ್ಯುಲರ್ ಎಜುಕೇಷನ್ ಸೊಸೈಟಿ ಅರಂತೋಡು ಇದರ ಸ್ಥಾಪಕ ನಿರ್ದೇಶಕರು, ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಸ್ಥಾಪಕಾಧ್ಯಕ್ಷರು, ಸುಳ್ಯ ಎ ಪಿ ಎಂ ಸಿ ಯ ಉಪಾಧ್ಯಕ್ಷರಾಗಿ, ದ ಕ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ, ಭೂ ನ್ಯಾಯ ಮಂಡಳಿಯ ಸದಸ್ಯರಾಗಿ , ಕೆ ಡಿ ಪಿ ಸದಸ್ಯರಾಗಿ, ಸಂಪಾಜೆ ಗ್ರಾಮ ಪಂಚಾಯತ್ ನ ಸದಸ್ಯರಾಗಿ, ಸಂಪಾಜೆ ಸಹಕಾರಿ ಸಂಘದ ನಿರ್ದೇಶಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಪ್ರತಿಷ್ಠಿತ ಪೊವ್ವಲ್ ಕುಟುಂಬದವರಾದ ಪಿ ಎ ಉಮ್ಮರ್ ಹಾಜಿ ಗೂನಡ್ಕ ಮತ್ತು ರುಕಿಯ ದಂಪತಿಗಳ ಸುಪುತ್ರರಾದ ಪಿ ಯು ಉಬೈಸ್ ಗೂನಡ್ಕ ರವರು ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಗೂನಡ್ಕ ಇದರ ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ.

Sponsors

Related Articles

Back to top button