ಕರಾವಳಿಗೆ ‘ಅಂಫಾನ್‌’ ಚಂಡ ಮಾರುತ???…

ಮಂಗಳೂರು: ಕೊರೊನಾ ರೋಗದಿಂದ ಹೈರಾಣಾಗಿರುವ ಕರಾವಳಿ ಪ್ರದೇಶಕ್ಕೆ ಇದೀಗ ‘ಅಂಫಾನ್‌’ ಚಂಡ ಮಾರುತದ ಪರಿಣಾಮಗಳ ಆತಂಕ ಎದುರಾಗಿದೆ.
ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ’ಅಂಫಾನ್‌’ ಚಂಡ ಮಾರುತ ಸೃಷ್ಟಿಯಾಗಿದೆ. ಮೇ 18ರಂದು ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ “ಯಲ್ಲೋ ಅಲರ್ಟ್‌’ ಘೋಷಣೆ ಮಾಡಲಾಗಿದ್ದು, ಇದು ಮುಂದೆ ಬರುವ ಮುಂಗಾರು ಮಳೆ ಪ್ರವೇಶಕ್ಕೆ ಪರಿಣಾಮ ಬೀರಬಹುದು. ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡು, ಕರಾವಳಿ ಭಾಗಕ್ಕೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Sponsors

Related Articles

Back to top button