ರವೀಂದ್ರ ಶೆಟ್ಟಿ ಮಂಚಿ ಕುಕ್ಕಾಜೆ ಇವರಿಗೆ ಗೌರವಾಭಿನಂದನಾ ಸಮಾರಂಭ…
![](wp-content/uploads/2020/09/064c9a01-7886-4aab-8d69-49e3e97f7e45-780x470.webp)
ಬಂಟ್ವಾಳ: ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸುದೀರ್ಘ 34 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ವಯೋ ನಿವೃತ್ತಿ ಹೊಂದಿದ ರವೀಂದ್ರ ಶೆಟ್ಟಿ ಮಂಚಿ ಕುಕ್ಕಾಜೆ ಇವರಿಗೆ ಗೌರವಾಭಿನಂದನಾ ಸಮಾರಂಭ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ಸೆ.5 ರಂದು ರಂದು ನಡೆಯಿತು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಟಿ ಜಿ ರಾಜಾರಾಮ್ ಭಟ್ ಅಧ್ಯಕ್ಷತೆ ವಹಿಸಿ ಸಹಕಾರ ಕ್ಷೇತ್ರದಲ್ಲಿ ದಕ್ಷ ಮತ್ತು ಪ್ರಾಮಾಣಿಕತೆಯ ಮೂಲಕ ರವೀಂದ್ರ ಶೆಟ್ಟಿಯವರು ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಅಭಿನಂದಿಸಿದರು. ಸಹಕಾರ ಸಂಘಗಳ ಉಪನಿಬಂಧಕಾರಾದ ಪ್ರವೀಣ್ ನಾಯಕ್, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ, ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್, ಸಹಕಾರ ಅಬಿವೃಧ್ದಿ ಅಧಿಕಾರಿ ತ್ರಿವೇಣಿ ರಾವ್ ಕೆ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಡಿ.ಜಿ ಎಂ ಶರ್ಮಿಳಾ ಗಡಿಯಾರ್,ಮುಖ್ಯ ಅಥಿತಿಗಳಾಗಿದ್ದರು.ಬಂಟ್ವಾಳ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯ ನಿರ್ವಾಹಣಾಧಿಕಾರಿಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಒಕ್ಕೂಟದ ಅಧ್ಯಕ್ಷ ಸುಧಾಕರ್ ಶೆಟ್ಟಿಯವರು ರವೀಂದ್ರ ಶೆಟ್ಟಿಯವರ ಸೇವೆಯ ಪರಿಚಯವನ್ನು ಸಬೆಯ ಮುಂದಿಟ್ಟರು.ಈಶ್ವರ ನಾಯ್ಕ್ ಸ್ವಾಗತಿಸಿ ಅಲ್ಬರ್ಟ್ ಡಿಸೋಜ ವಂದಿಸಿದರು.