ಶ್ರೀ ಸದಾಶಿವ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ – ಪೂರ್ವಭಾವಿ ಸಭೆ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ಮಹಾಶಿವರಾತ್ರಿ ಮಾರ್ಚ್ 11 ರಂದು ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಜರಗಲಿದ್ದು ಆ ಬಗ್ಗೆ ಪೂರ್ವಭಾವಿ ಸಭೆ ಫೆ. 7 ರಂದು ನಡೆಯಿತು.
ಶ್ರೀ ದೇವಸ್ಥಾನದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ ದೇವಿಪ್ರಸಾದ್ ಪೂಂಜಾ ಅಧ್ಯಕ್ಷತೆಯಲ್ಲಿ ಈ ಪೂರ್ವಭಾವಿ ಸಭೆ ಜರಗಿತು. ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪಾಣೆಮಂಗಳೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಕೆ ಸದಾನಂದ ಶೆಟ್ಟಿ, ಬಾಲಕೃಷ್ಣ, ಕೆ ಕೃಷ್ಣ. ಭಟ್, ರವಿಚಂದ್ರ, ಸುರೇಶ, ಕಿಶೋರ್, ಕೆ ಸೀತಾರಾಮ ಶೆಟ್ಟಿ, ಎಂ ಕೃಷ್ಣ ಶಾಮ್, ರಮೇಶ, ಸಂತೋಷ್, ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು.

https://m.facebook.com/story.php?story_fbid=1034597280360353&id=100014302719167

Sponsors

Related Articles

Leave a Reply

Your email address will not be published. Required fields are marked *

Back to top button