ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ – ವಿ. ಆರ್.ಸುದರ್ಶನ್ ಅವರಿಗೆ ವಿಜ್ಞಾಪನಾ ಪತ್ರ…

ಮಂಗಳೂರು: ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಗಾಣಿಗ ಸಮಾಜದ ಮುಖಂಡರು ಹಾಗೂ ಕರ್ನಾಟಕ ವಿಧಾನ ಪರಿಷತ್ ಇದರ ಮಾಜಿ ಸ್ಪೀಕರ್ ಶ್ರೀ ವಿ. ಆರ್.ಸುದರ್ಶನ್ ಹಾಗೂ ಅಖಿಲ ಕರ್ನಾಟಕ ಗಾಣಿಗರ ಸಂಘ, ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಎಂ. ಆರ್. ರಾಜಶೇಖರ್ ಗಾಣಿಗ ಇವರಿಗೆ ನೀಡಿ ಬ್ರಹ್ಮ ಕಲಶೋತ್ಸವಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಲು ವಿನಂತಿಸಲಾಯಿತು.
ಮಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಗಾಣಿಗ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಗಾಣಿಗ ಸಮಾಜದ ಮುಖಂಡರ ಸಭೆಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಉಳ್ಳಾಲ ಗಾಣಿಗ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕೊಲ್ಯ, ಸೋಮೇಶ್ವರ ಗಾಣಿಗ ಸಂಘದ ಅಧ್ಯಕ್ಷರಾದ ಶ್ರೀ ರಾಮದಾಸ್, ಶ್ರೀ ಶೇಖರ್ ಸೋಮೇಶ್ವರ, ಶ್ರೀ ಜನಾರ್ಧನ ಆರ್ಕುಲ, ಶ್ರೀ ಜಯರಾಮ ಅಡ್ಯಾರ್, ಶ್ರೀ ಸಂಜೀವ ಅಡ್ಯಾರ್, ಶ್ರೀ ಗೋಪಾಲಕೃಷ್ಣ ಮುಂತಾದವರು ಇದ್ದರು.

whatsapp image 2023 11 16 at 11.00.58 am

Sponsors

Related Articles

Back to top button