ಸುಳ್ಯ – ನಗರ ಕಾಂಗ್ರೆಸ್ ಸಮಿತಿ ಸಭೆ…

ಸುಳ್ಯ: ನಗರ ಕಾಂಗ್ರೆಸ್ ಸಮಿತಿ ಸಭೆ ಆ.3 ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕುರಿತು ವಿಚಾರ ವಿನಿಮಯ ನಡೆಸಲಾಯಿತು. ಅಲ್ಲದೆ ಕೆಪಿಸಿಸಿ ಯ ಆರೋಗ್ಯ ಹಸ್ತ ಯೋಜನೆಯ ಕೊರೋನ ವಾರಿಯರ್ಸ್ ಗಳಿಗೆ ಸಹಕಾರ ನೀಡುವಂತೆ ಸಲಹೆ ನೀಡಲಾಯಿತು.
ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರಾದ ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಬಾಲಕೃಷ್ಣ ಭಟ್ ಕೊಡೆಂಕಿರಿ, ಮಾಜಿ ನಗರ ಪಂಚಾಯತ್ ಸದಸ್ಯರಾದ ಪ್ರೇಮ ಟೀಚರ್, ನಂದರಾಜ್ ಸಂಕೇಶ, ಭವಾನಿ ಶಂಕರ್ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ಹಮೀದ್ ಕುತ್ತಮೊಟ್ಟೆ, ಜಯರಾಂ ಭಟ್ ಬೆಟ್ಟ, ರಫೀಕ್ ಪಡು, ಮಧುಸೂದನ ಬೂಡು, ಕೃಷ್ಣ ಸ್ವಾಮಿ ಕಂದಡ್ಕ, ಶಹೀದ್ ಪಾರೆ, ಶಂಕರ ಪಾಟಾಳಿ, ಹನೀಫ್ ಬೀಜಕೊಚ್ಚಿ, ವಸಂತ ಕುದ್ಪಾಜೆ, ಇಬ್ರಾಹಿಂ ಜಯನಗರ, ಸಿದ್ಧಿಕ್ ಬೂಡು, ಸುರೇಶ್ ಕಾಮತ್ ಜಯನಗರ ಭಾಗವಹಿಸಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button