ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ – ಸುಳ್ಯದ ಕಾರ್ಯಕರ್ತರಿಂದ ಪ್ರತಿಜ್ಞಾ ಸ್ವೀಕಾರ…

ಸುಳ್ಯ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮೂವರು ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಬೆಂಗಳೂರು ಕೆಪಿಸಿಸಿ ಕಾರ್ಯಾಲಯದಲ್ಲಿ ಜುಲೈ 2 ರಂದು ನಡೆಯಿತು. ಇದರ ಅಂಗವಾಗಿ ಸುಳ್ಯ ತಾಲೂಕಿನಾದ್ಯಂತ ಏಕ ಕಾಲದಲ್ಲಿ ಸುಮಾರು 31 ಗ್ರಾಮ ಪಂಚಾಯತ್ ವಾರ್ಡ್ ಗಳಲ್ಲಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಾಗೂ ಝೂಮ್ ಮೂಲಕ ನೇರ ವೀಕ್ಷಣಾ ಕಾರ್ಯಕ್ರಮಗಳು ನಡೆಯಿತು.
ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕ್ರಮವನ್ನು ಕಾಂಗ್ರೆಸ್ ಹಿರಿಯ ನಾಯಕ, ನ.ಪಂ ಮಾಜಿ ಅಧ್ಯಕ್ಷ ಎಂ ವಿ ‌ವೆಂಕಟ್ರಮಣ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಕಾಂಗ್ರೆಸ್ ಪಕ್ಷ ಇದೀಗ ಕೆಲವು ವರ್ಷಗಳಿಂದ ಚುನಾವಣೆಗಳಲ್ಲಿ ಸೋಲುತ್ತಿದ್ದರೂ ಇಂದಿಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸು ಉತ್ತಮ ರೀತಿಯಲ್ಲಿದೆ. ಮಾಜಿ ಪ್ರಧಾನ ಮಂತ್ರಿಗಳಾದ ದಿ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವರು ಹಲವಾರು ಅಭಿವೃದ್ಧಿ ಯೋಜನೆಗಳು ಹಾಗೂ ತಂತ್ರಜ್ಞಾನದ ಕೊಡುಗೆಗಳನ್ನು ದೇಶಕ್ಕೆ ನೀಡಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲು ನಾಯಕರು ಕಾರ್ಯಕರ್ತರು , ನಾಯಕರುಗಳು ಒಟ್ಟಾಗಿ ಶ್ರಮಿಶಬೇಕೆಂದು ಕರೆ ನೀಡಿದರು.

‌ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿ.ಕೆ.ಶಿವಕುಮಾರ್ ರವರ ನೇತೃತ್ವ ರಾಜ್ಯದಲ್ಲಿ ಹೊಸ ಸಂಚಲನ ಮಾಡಿದೆ. ತನ್ನೊಂದಿಗೆ ಇಡೀ ಕಾಂಗ್ರೆಸ್ ಕಾರ್ಯಕರ್ತರನ್ನು ಒಂದುಗೂಡಿಸಿ ಪ್ರಮಾಣವಚನಕ್ಕೆ ಸೇರಿಸಿ ಪ್ರತಿಜ್ಞಾವಿಧಿ ಭೋದಿಸುವ ಕಾರ್ಯಕ್ರಮ ಅಭೂತಪೂರ್ವ ಯಶಸ್ಸಿಗೆ ಡಿ.ಕೆ.ಶಿವಕುಮಾರ್ ರವರು ಕಾರಣರಾಗಿದ್ದಾರೆ. ಇಂದು ತಾಲೂಕಿನ 31 ಗ್ರಾಮ ಪಂಚಾಯತ್ ಬೂತ್ ಗಳಲ್ಲಿ ಏಕಕಾಲದಲ್ಲಿ ಪ್ರತಿಜ್ಞಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ನಾಯಕರ ಶ್ರಮ ಎಂದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಉಸ್ತುವಾರಿ ಜಿ.ಕೃಷ್ಣಪ್ಪ ,ಕೆಪಿಸಿಸಿ ಸದಸ್ಯ ಡಾ.ರಘು ಕಾರ್ಯಕ್ರಮ ಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ.ಸದಸ್ಯ ಐ.ಕುಂಞಿಪಳ್ಳಿ, ಮಾಜಿ ನ.ಪಂ.ಸದಸ್ಯ ಜನಾರ್ದನ ಗೌಡ ಮೋಂಟಡ್ಕ, ಡಿಸಿಸಿ ವೀಕ್ಷಕ ಮಹೇಶ್ ರೈ ಅಂಕೊತ್ತಿಮಾರು, ಮಾಜಿ ಶಾಸಕ ಕುಶಲ, ಸಿದ್ದಿಕ್ , ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟ ರಾಜಾರಾಮ್ ಭಟ್ ಉಪಸ್ಥಿತರಿದ್ದರು.
ಪ್ರತಿಜ್ಞಾ ಸಮಾರಂಭದ ಉಸ್ತುವಾರಿ ಯಸ್. ಸಂಶುದ್ದೀನ್ ಸ್ವಾಗತಿಸಿ , ಜನಾರ್ದನ ಮೋಂಟಡ್ಕ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಡಿಕೆಶಿ ಯವರ ಪದಗ್ರಹಣ ಕಾರ್ಯಕ್ರಮ ವನ್ನು ವೀಕ್ಷಿಸಲು ಬೃಹತ್ ಪರದೆ ಹಾಗೂ ಝೂಮ್ ಕಾರ್ಯಕ್ರಮ ಕ್ಕೆ ಟಿವಿ ಗಳನ್ನು ಅಳವಡಿಸಲಾಗಿತ್ತು. ಪಕ್ಷದ ಮುಖಂಡರಾದ ಸುಧೀರ್ ರೈ ಮೇನಾಲ, ಗೋಕುಲ್ ದಾಸ್, ಪಿ.ಎ.ಮಹಮ್ಮದ್, ಮುಸ್ತಫಾ ಜನತಾ, ಶರೀಫ್ ಕಂಠಿ, ಬಾಲಕೃಷ್ಣ ಭಟ್ ಕೊಡಂಕೇರಿ, ಶಾಫಿ ಕುತ್ತಮೊಟ್ಟೆ, ಸುಜಯ ಕೃಷ್ಣ, ಪ್ರೇಮಾ ಟೀಚರ್ , ಶ್ರೀಲತಾ ಬೂಡು ಮೊದಲಾದವರು ಭಾಗವಹಿಸಿದ್ದರು. ಪಕ್ಷದ ವಕ್ತಾರ ನಂದರಾಜ್ ಸಂಕೇಶ್ ಮಾಧ್ಯಮ ವಕ್ತಾರ ಭವಾನಿಶಂಕರ ಕಲ್ಮಡ್ಕ ಮೊದಲಾದವರು ಸಹಕರಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button