ಪಠ್ಯ ಬೋಧನೆಗಿಂತ ಮಿಗಿಲಾದ ಮೌಲ್ಯ ಕಲಿಸಿದರೆ ಶಿಕ್ಷಣ ಸಂಸ್ಥೆ ಸಾರ್ಥಕ- ಯೂಸುಫ್ ವಿಟ್ಲ…

ಬಂಟ್ವಾಳ : ಪಾಠ ಬೋಧನೆಯು ಕರ್ತವ್ಯವಾಗಿದ್ದು ಪ್ರತೀ ಶಿಕ್ಷಣ ಸಂಸ್ಥೆಯು ಮಾಡಲೇಬೇಕಾದ ಕಾರ್ಯವಾಗಿದೆ. ಆದರೆ ಪಠ್ಯ-ಸಹಪಠ್ಯಕ್ಕಿಂತ ಮಿಗಿಲಾದ ಚಟುವಟಿಕೆಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ವಿದ್ಯಾಥಿಗಳಿಗೆ ಅಳವಡಿಸಲು ಒಂದು ಶಿಕ್ಷಣ ಸಂಸ್ಥೆಗೆ ಸಾಧ್ಯವಾದರೆ ಅದು ಮಾದರಿ ಶಿಕ್ಷಣ ಸಂಸ್ಥೆ ಎನಿಸಿಕೊಳ್ಳುತ್ತದೆ ಎಂದು ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಯೂಸುಫ್ ವಿಟ್ಲ ಹೇಳಿದರು.
ಅವರು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮತ್ತು ಹೆತ್ತವರ ಜಂಟಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಾಲಿನ ಪಠ್ಯೇತರ ಚಟುವಟಿಕೆಗಳಲ್ಲಿ ವಿಶಿಷ್ಟ ಸಾಧನೆ ಗೈದ ವಿದ್ಯಾರ್ಥಿಗಳನ್ನು ಅವರ ಹೆತ್ತವರ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಸದ್ರಿ ಸಾಲಿನಲ್ಲಿ ಪ್ರತಿಶತ ನೂರು ಹಾಜರಾತಿಯನ್ನು ದಾಖಲಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು ಅವರ ಇಳಿವಯಸ್ಸಿನಲ್ಲಿ ಆತ್ಮಸಾಕ್ಷಿಯಾಗಿ ನೋಡಿಕೊಳ್ಳುತ್ತೇವೆ ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಆಂಗ್ಲ ಭಾಷಾ ಉಪನ್ಯಾಸಕ ದಾಮೋದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಬಾಲಕೃಷ್ಣ ನಾಯ್ಕ್ ಕೆ, ಲವೀನಾ ಶಾಂತಿ ಲೋಬೋ, ಯಶೋಧ ಕೆ, ಲಕ್ಷ್ಮೀ ಆಚಾರ್ಯ ಕೆ, ಆಶಾಲತಾ, ಹನೀಫ್, ಅಂಬಿಕಾ, ದಿವ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮುರ್ಷಿದಾ ಬಾನು ಸ್ವಾಗತಿಸಿ, ಭೂಮಿಕಾ ಧನ್ಯವಾದ ಗೈದರು. ವಿದ್ಯಾರ್ಥಿಗಳಾದ ಕಾರ್ತಿಕ್ ಭಟ್, ತಸ್ರೀನಾ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button