ವೈದ್ಯರ ಮುಷ್ಕರ – ಕೊರೊನಾ ವರದಿ ಇಲ್ಲ…

ಮಂಗಳೂರು: ವೈದ್ಯರ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಕೊರೊನಾ ವರದಿ ನೀಡದೇ ಇರಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈವರೆಗೆ ಪ್ರತಿದಿನ ಸಂಜೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜಿಲ್ಲೆಯ ಕೊರೊನಾ ವರದಿ ನೀಡುತ್ತಿತ್ತು. ಆದರೆ, ನಿನ್ನೆಯಿಂದ ಕೊರೊನಾ ವರದಿ ನೀಡುತ್ತಿಲ್ಲ.
ಸರಕಾರ ವೈದ್ಯರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವರದಿ ಹಾಗೂ ಕೆಲವು ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ ಎನ್ನಲಾಗಿದೆ. ಅನ್ ಲೈನ್ ಸಹಿತ ವರದಿ ನೀಡುವಿಕೆ, ಸರಕಾರಿ ಸಭೆಗಳಿಗೆ ಗೈರಾಗುವ ನಿರ್ಧಾರವನ್ನು ವೈದ್ಯರು ಕೈಗೊಂಡಿದ್ದಾರೆ. ಸೆ.21ರೊಳಗೆ ಸರ್ಕಾರ ಸ್ಪಂದಿಸದಿದ್ದರೆ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆ ಸ್ಥಗಿತಗೊಳಿಸುವ ನಿರ್ಣಯವನ್ನು ವೈದ್ಯರು ಕೈಗೊಂಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button