ಸುಳ್ಯ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಪರಿವರ್ತಿಸುವಂತೆ ಸಚಿವರಿಗೆ ಕೆ. ಎಂ. ಮುಸ್ತಫ ಮನವಿ…

ಸುಳ್ಯ: ಕರ್ನಾಟಕ ಸರಕಾರದ ಪೌರಾಡಳಿತ ಸಚಿವರಾದ ರಹೀo ಖಾನ್ ರನ್ನು ಬೆಂಗಳೂರು ನಲ್ಲಿ ಭೇಟಿ ಮಾಡಿದ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ. ಎಂ. ಮುಸ್ತಫ ಅವರು ಸುಳ್ಯ ಪಟ್ಟಣ ಪಂಚಾಯತಿ ಯನ್ನು ಪುರಸಭೆಯನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಈ ಹಿಂದೆಯೇ ಸರಕಾರಕ್ಕೆ ಸಲ್ಲಿಕೆ ಯಾಗಿದ್ದು, ಅದನ್ನು ಅನುಷ್ಠಾನ ಮಾಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು ಅಧಿವೇಶನ ಮುಗಿದ ತಕ್ಷಣ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ ಆಪ್ತ ಕಾರ್ಯದರ್ಶಿಗೆ ವಿಶೇಷ ಮುತುವರ್ಜಿ ವಹಿಸುವಂತೆ ಸೂಚಿಸಿ ಮನವಿ ಹಸ್ತಾoತರಿಸಿದರು.

whatsapp image 2023 07 07 at 7.12.49 pm (1)
Sponsors

Related Articles

Back to top button