ಬೀಳ್ಕೊಡುಗೆ ಕಾರ್ಯಕ್ರಮ…

ಬಂಟ್ವಾಳ: ಬೀಡಿ ಕಂಟ್ರಾಕ್ಟ್ ದಾರರ ಸಂಘದ ನೇತೃತ್ವದಲ್ಲಿ ಸೌತ್ ಕೆನರಾ ಹೋಮ್ ಇಂಡಸ್ಟ್ರೀಸ್ ಬಿಸಿರೋಡು ಡಿಪೋ ದಲ್ಲಿ ಸೇವಾ ನಿವೃತ್ತಿ ಹೊಂದಿದ ಪಾಲುದಾರ ಸುಧಾಕರ ಶೆಣೈ ಮತ್ತು ಮೂವರು ಸಿಬ್ಬಂದಿಗಳಾದ ಜಗದೀಶ್ ಪೈ ಬಂಟ್ವಾಳ, ಸದಾನಂದ ಪಾಣೆಮಂಗಳೂರು, ಪ್ರಕಾಶ್ ಶೆಣೈ ಬಿಸಿರೋಡು ಅವರನ್ನು ಗೌರವ ನೀಡಿ ಬೀಳ್ಕೊಡಲಾಯಿತು.
ಕಂಪನಿಯ ಪಾಲುದಾರ ಉಮೇಶ್ ಶೆಣೈ ಅವರು ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಸಂಸ್ಥೆಯ ಅಭಿವೃದ್ಧಿಗಾಗಿ ಸಿಬ್ಬಂದಿಗಳು ಶ್ರಮವಹಿದರೆ ಅದರ ಪಾಲು ಕಂಪೆನಿಯ ಸರ್ವ ವಿಭಾಗಕ್ಕೂ ಸಿಗಲಿದೆ ಎಂದರು.ಬೀಡಿ ಉದ್ಯಮದಲ್ಲಿಯೂ ಸ್ಪರ್ಧಾತ್ಮಕ ಮಾರುಕಟ್ಟೆ ಇರುವುದರಿಂದ ಗುಣಮಟ್ಟವನ್ನು ಕಾಯ್ದುಕೊಂಡು ವ್ಯವಹಾರವನ್ನು ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಬೀಡಿ ಕಂಟ್ರಾಕ್ಟ್ ದಾರರ ಸಂಘದ ಗೌರವಾಧ್ಯಕ್ಷ ಬಾಬು ಪೂಜಾರಿ ಮಾರ್ನಬೈಲು, ಸಂಸ್ಥೆಯ ಮ್ಯಾನೇಜರ್ ಕೂಸಪ್ಪ ಮೂಲ್ಯ, ಸಂಘದ ಪ್ರಮುಖರಾದ ವಿಶ್ವನಾಥ ಕೊಟ್ಟಾರಿ ಸಜೀಪ ಮುನ್ನೂರು, ಹರೀಶ್ ತುಳಸಿವನ, ಸುಧಾಕರ ಆಚಾರ್ಯ, ಇಂದ್ರೇಶ್ ಸಂಚಯ ಗಿರಿ, ಉಂಜ್ಞಾ ನಂದಾವರ, ನಜೀರ್ ನಂದಾವರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಪ್ರಶಾಂತ್ ಕೊಟ್ಟಾರಿ ಸ್ವಾಗತಿಸಿ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button