ಅಂತರಿಕ ಭರವಸೆ ಕೋಶ ಕಾರ್ಯಗಾರ…

ಬಂಟ್ವಾಳ: ಬಂಟ್ವಾಳ ನಗರ ಠಾಣಾ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಮಾಜೆ ಬಂಟ್ವಾಳದಲ್ಲಿ ವಿದ್ಯಾರ್ಥಿಗಳಿಗೆ ಅಂತರಿಕ ಭರವಸೆ ಕೋಶ ಕಾರ್ಯಗಾರ ನಡೆಯಿತು.
ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ರಾದ ಅವಿನಾಶ್ ಎಚ್ ಗೌಡ ರವರು ಸೈಬರ್ ಅಪರಾಧ, ಮಹಿಳಾ ಸುರಕ್ಷ ತೆ, ಮಾದಕದ್ರವ್ಯ,ಸಾಮಾಜಿಕ ಜಾಲತಾಣಗಳ ಒಳಿತು ಕೆಡುಕು ಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಬಂಟ್ವಾಳ ಸಂಚಾರ ಠಾಣೆಯ ಉಪನಿರೀಕ್ಷಕ ರಾದ ರಾಜೇಶ್ ರವರು ರಸ್ತೆ ಸುರಕ್ಷತಾ ನಿಯಮದ ಬಗ್ಗೆ ಹಾಗೂ ಪೊಲೀಸ್ ನೇಮಕಾತಿ ಹಾಗೂ ಪರೀಕ್ಷೆ ತಯಾರಿ ಬಗ್ಗೆ ಮಾಹಿತಿಯನ್ನು ನೀಡಿದರು.ಈ ಕಾರ್ಯಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ರಾದ ಡಾ.ಸತೀಶ್ ಗಟ್ಟಿ ಯವರು ವಹಿಸಿದರು.
ಹಿರಿಯ ಉಪನ್ಯಾಸಕ ಡಾ.ಗಿರೀಶ್ ಭಟ್ ,ನಂದಕಿಶೋರ್ ಸೇರಿದಂತೆ ಉಪನ್ಯಾಸಕ ವೃಂದದವರು ಹಾಗೂ ಬಂಟ್ವಾಳ ನಗರ ಠಾಣಾ ಎ.ಎಸ್.ಐ ಜಿನ್ನಪ್ಪ ಗೌಡ,ಸಿಬ್ಬಂದಿಗಳಾದ .ಸುಜು. ಟಿ.ಜೆ,ನಾಗರಾಜ್,ರಾಘವೇಂದ್ರ,ಮಧು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಮಮತಾ ನೆರವೇರಿಸಿದರು.

Sponsors

Related Articles

Back to top button