ಗಾಂಧಿನಗರ SYS SSF ಇಫ್ತಾರ್ ಸಂಗಮ ಹಾಗೂ ದುವಾ ಮಜ್ಲಿಸ್…

ಸುಳ್ಯ: SYS ಬ್ರಾಂಚ್ ಹಾಗೂ SSF ಗಾಂಧಿನಗರ ಶಾಖೆಯ ವತಿಯಿಂದ ಇಫ್ತಾರ್ ಸಂಗಮ ಮತ್ತು ಮರಣ ಹೊಂದಿದವರ ಹೆಸರಲ್ಲಿ ಯಾಸೀನ್ ದುವಾ ಮಜ್ಲಿಸ್ ಸುನ್ನೀ ಸೆಂಟರ್ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನಡೆಸಲಾಯಿತು.
ಮಜ್ಲಿಸ್ ನ ನೇತೃತ್ವವನ್ನು ಅಸ್ಸಯದ್ ತ್ವಾಹಿರ್ ಸಅದಿ ತಂಙಳ್ ರವರು ನೆರವೇರಿಸಿದರುಸಿದರು.MJM ಗಾಂಧಿನಗರ ಇದರ ಅಧ್ಯಕ್ಷರಾದ ಹಾಜಿ ಕೆ ಎಂ ಮುಸ್ತಾಫ,ಉಪಾಧ್ಯಕ್ಷರಾದ ಮಹಮ್ಮದ್ KMS, ಹನೀಫ್ ಬುಶ್ರಾ,ಲತೀಫ್ ಸಖಾಫಿ, ಅಬ್ದುಲ್ಲಾ ಸಖಾಫಿ, ರಫೀಕ್ ಚೋಯ್ಸಿ,ಮಹಮ್ಮದ್ ಪೈಂಟರ್,ಅಝೀಝ್ ಫೊಟ್ ವೇರ್, ಅಹಮದ್ ಸಿಎ, ಮಹಮ್ಮದ್ ಟೈಲರ್,ಹಾರಿಸ್ ಎಸ್.ಎಚ್,ಲತೀಫ್, ಅಬ್ದುಲ್ ನಾಫಿ, ರಫೀಕ್ ನಾವೂರು ಅಬೊಬಕರ್ ವೈಟ್, ಸಿದ್ದೀಕ್ ಮೇನೇಜರ್ ಕ್ಯಾಂಪಸ್ ವಿದ್ಯಾರ್ಥಿಗಳು, ಸಂಘ ಕುಟುಂಬದ ಕಾರ್ಯಕರ್ತರು ಹಾಗೂ ಜಮಾಅತ್ ನ ಸುನ್ನೀ ಸ್ನೇಹಿಗಳು ಉಪಸ್ಥಿತರಿದ್ದರು.
ವಿಶೇಷವಾಗಿ ಸುಳ್ಯ ಕ್ಯಾಂಪಸ್ 60 ವಿದ್ಯಾರ್ಥಿನಿಯರಿಗೆ ರಮಳಾನ್ 30ರ ವರೆಗೆ ಎಲ್ಲಾ ದಿವಸ ಇಫ್ತಾರ್ ವಿರುನ್ನ್ ಕ್ಯಾಂಪಸ್ ನಲ್ಲಿ ನೀಡಲಾಗುತ್ತದೆ ಹಾಗೂ ವೈದ್ಯಕೀಯ ನೆರವು ಮತ್ತು ಉಸ್ತಾದ್ ರ ಮನೆ ನಿರ್ಮಾಣ ಕ್ಕೆ ರಂಝಾನ್ ತಿಂಗಳ ಸಹಾಯ ಹಸ್ತ ನೀಡಲಾಯಿತು ಎಂದು ನಿರ್ವಹಣಾ ಸದಸ್ಯರಾದ ಸಿದ್ದೀಕ್ ಕಟ್ಟೆಕ್ಕಾರ್, ಸಿದ್ದೀಕ್ ಬಿ ಎ,ಆಬಿದ್ ಕಲ್ಲುಮುಟ್ಳು,ಸಿಯಾದ್ ಜಯನಗರ,ಬಶೀರ್ ಕಲ್ಲುಮುಟ್ಳು, ನೌಶಾದ್ ಕೆರೆಮೂಲೆ,ಆರಿಫ್ ಬುಶ್ರ, ಗಾಂಧಿನಗರ ಕ್ಯಾಂಪಸ್ ಕಾರ್ಯದರ್ಶಿ ಸಲ್ಮಾನ್ ಫಾರಿಸ್ ಬೋರುಗುಡ್ಡೆ, ಲತೀಫ್ ಕೆ.ಪಿ. ತಿಳಿಸಿದರು.

Sponsors

Related Articles

Back to top button