ಉದಯ ಯುವಕ ಮಂಡಲ ಸೇರ- ಬೆಳ್ಳಿ ಹಬ್ಬ ಸಂಭ್ರಮಾಚರಣೆ …..

ಬಂಟ್ವಾಳ: ಉದಯ ಯುವಕ ಮಂಡಲ ಸೇರ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆ ಇತ್ತೀಚೆಗೆ ನೆರವೇರಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ , ಗಾ.ಪಂ.ಅಧ್ಯಕ್ಷ ವಸಂತ ಪಲ್ಲಕೋಡಿ , ಬರಿಮಾರು ಮಹಮ್ಮಾಯ ದೇವಸ್ಥಾನದ ಆಡಳಿತ ಮುಕ್ತೇಸರ ರಾಕೇಶ್ ಪ್ರಭು, ಮನೋಜ್ ಕಟ್ಟೆಮಾರ್ ಅಮ್ಟೂರು, ಶಂಕರಿಯಮ್ಮ ಕೈಂತಜೆ, ಜಯಂತ ನಡುಬೈಲು, ಉದಯ ಚೌಟ ಮಾಣಿ , ಸದಾಶಿವ ಆಚಾರ್ಯ ,ಅನಿಲ್ ಪಿಂಟೋ ಮಂಗಳೂರು, ಕುಶಲ ಎಮ್.ಪೆರಾಜೆ, ಸುರೇಶ್ ದರ್ಬೆ,ಚೆನ್ನಪ್ಪ ಅಂಚನ್ ಸುರ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಲಾಯಿತು. ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ನಿವೃತ್ತ ದೈಹಿಕ ಶಿಕ್ಷಕ ಪ್ರಹ್ಲಾದ ಶೆಟ್ಟಿ ಜಡ್ತಿಲ , ಕರ್ನಾಟಕ ಪ್ರೌಢ ಶಾಲೆ ಮಾಣಿಯ ನಿವೃತ್ತ ದೈಹಿಕ ಶಿಕ್ಷಕ ಕೆ.ಗಂಗಾಧರ ರೈ, ಸುಳ್ಯ ಗಾಂಧಿ ನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿ , ವಾಲಿಬಾಲ್ ಆಟಗಾರ ದೀಕ್ಷಿತ್ ಸುರ್ಲಾಜೆ ಇವರನ್ನು ಸಭಾಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಯುವಕ ಮಂಡಲದ ಯಶಸ್ವಿಗೆ ಶ್ರಮಿಸಿದ 25 ಹಿರಿಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Sponsors

Related Articles

Leave a Reply

Your email address will not be published. Required fields are marked *

Back to top button