ಹೈಮಾಸ್ಟ್ ದೀಪ ಉದ್ಘಾಟನೆ…

ಬಂಟ್ವಾಳ: ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಪುತ್ರೋಟಿಬೈಲ್ ನವಜೀವನ ವ್ಯಾಯಾಮ ಶಾಲೆ ಬಳಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ ಇವರು 2020-21ನೇ ಸಾಲಿನ 15ನೇ ಹಣಕಾಸು ಕ್ರಿಯಾ ಯೋಜನೆಯ ಅನುದಾನದಿಂದ ಸುಮಾರು ರೂ. 1.48 ಲಕ್ಷದ ಹೈಮಾಸ್ಟ್ ದೀಪ ಒದಗಿಸಿದ್ದು, ಈ ದೀಪವನ್ನು ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನವಜೀವನ ವ್ಯಾಯಾಮ ಶಾಲೆಯ ಜೀರ್ಣೋದ್ದಾರದ ಕಾರ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮಾಜಿ ಸಚಿವರಿಗೆ ನವಜೀವನದ ಅಧ್ಯಕ್ಷ ಶರತ್ ಕುಮಾರ್ ಮತ್ತು ಸರ್ವ ಸದಸ್ಯರು ಮನವಿ ಸಲ್ಲಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button