ಹೈಮಾಸ್ಟ್ ದೀಪ ಉದ್ಘಾಟನೆ…
![](wp-content/uploads/2020/10/512e7c9b-e5c6-4970-bae2-663b450f4640-780x470.webp)
ಬಂಟ್ವಾಳ: ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಪುತ್ರೋಟಿಬೈಲ್ ನವಜೀವನ ವ್ಯಾಯಾಮ ಶಾಲೆ ಬಳಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ ಇವರು 2020-21ನೇ ಸಾಲಿನ 15ನೇ ಹಣಕಾಸು ಕ್ರಿಯಾ ಯೋಜನೆಯ ಅನುದಾನದಿಂದ ಸುಮಾರು ರೂ. 1.48 ಲಕ್ಷದ ಹೈಮಾಸ್ಟ್ ದೀಪ ಒದಗಿಸಿದ್ದು, ಈ ದೀಪವನ್ನು ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನವಜೀವನ ವ್ಯಾಯಾಮ ಶಾಲೆಯ ಜೀರ್ಣೋದ್ದಾರದ ಕಾರ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮಾಜಿ ಸಚಿವರಿಗೆ ನವಜೀವನದ ಅಧ್ಯಕ್ಷ ಶರತ್ ಕುಮಾರ್ ಮತ್ತು ಸರ್ವ ಸದಸ್ಯರು ಮನವಿ ಸಲ್ಲಿಸಿದರು.