ನೇರಳಕಟ್ಟೆ- ಯೋಗಶಿಬಿರ ಉದ್ಘಾಟನೆ…

ಬಂಟ್ವಾಳ: ನೇರಳಕಟ್ಟೆ ಶ್ರೀ ಗಣೇಶ ಸಭಾಭವನದಲ್ಲಿ ಡಿ.5 ರಂದು ಹತ್ತು ದಿನಗಳ ಕಾಲ ಯೋಗ ಶಿಬಿರವನ್ನು ಅಯ್ಯಪ್ಪ ಗುರುಸ್ವಾಮಿ ಹರೀಶ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭಹಾರೈಸಿದರು. ಯೋಗ ಗುರುಗಳಾದ ವಾರಣಾಶಿ ಶ್ರೀ ಪ್ರಕಾಶಾನಂದ ಗುರೂಜಿಯವರು ದಿನನಿತ್ಯ ಮಾಡಬೇಕಾದ ಪ್ರಾರ್ಥನೆ, ಯೋಗಾಸನ, ಪ್ರಾಣಾಯಾಮ , ಧ್ಯಾನ ವಿಧಾನವನ್ನು ಕಲಿಸಿಕೊಡಲಿದ್ದಾರೆ.
ಶಿಬಿರದ ಸಂಯೋಜಕರಾದ ವಿಶು ಕುಮಾರ್ ನೇರಳಕೆಟ್ಟೆ , ಶಾರೀರಿಕ ಶಿಕ್ಷಕ ದಿನಕರ ಮಾಣಿ, ನಾಗೇಶ ಕೊಂಕಣ ಪದವು, ಕರುಣಾಕರ ಕೆ. , ಉಮೇಶ ಎಸ್ ಪಿ, ಯಶೋಧರ ಆಚಾರ್ಯ ಬೊಳ್ಳುಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೆರಾಜೆಯಲ್ಲಿ ಸಮಾರೋಪ : ಶ್ರೀ ದೇವಿ ಭಜನಾ ಮಂದಿರ ಬೊಳ್ಳುಕಲ್ಲು ಪೆರಾಜೆಯಲ್ಲಿ ಯೋಗ ಶಿಬಿರದ ಸಮಾರೋಪ ಸಮಾರಂಭವು ಜರಗಿತು. ಯೋಗ ಗುರುಗಳಾದ ವಾರಣಾಶಿಯ ಪ್ರಕಾಶಾನಂದ ಗುರೂಜಿಯವರನ್ನು ಗುರುದಕ್ಷಿಣೆ ಫಲಪುಷ್ಪ ನೀಡಿ ಗೌರವಿಸಲಾಯಿತು.
ಶಿಕ್ಷಕರಾದ ಯತಿರಾಜ ಪೆರಾಜೆ ಸ್ವಾಗತಿಸಿ , ಜಯಾನಂದ ಪೆರಾಜೆ ಪ್ರಸ್ತಾವನೆ ಗೈದರು. ಶಾರೀರಕ ಶಿಕ್ಷಕÀ ದಿನಕರ್ ಬೊಳ್ಳುಕಲ್ಲು ಅನಿಸಿಕೆ ವ್ಯಕ್ತಪಡಿಸಿ ವಂದಿಸಿದರು. ಗ್ರಾ.ಪಂ. ಮಾಜಿ ಸದಸ್ಯ ಉಮೇಶ ಎಸ್ ಪಿ. ನಿರೂಪಿಸಿದರು. ಶ್ರೀನಿವಾಸ ಪೂಜಾರಿ ಮಿತ್ತಪೆರಾಜೆ , ನಾರಾಯಣ ಎಮ್ ಪಿ., ಹರೀಶ ಶೆಟ್ಟಿ ಪಾನೂರು ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button