ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಬಂಟ್ವಾಳ ಭೇಟಿ…

ಬಂಟ್ವಾಳ: ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಜ. 5 ರಂದು ತುಳು ಶಿವಳ್ಳಿ ಸಭಾಭವನ ಬಿ ಸಿ ರೋಡ್ ನಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಅವರು ಈ ಸಂದರ್ಭದಲ್ಲಿ ತಮ್ಮ ಚತುರ್ಥ ಪರ್ಯಾಯ ಪೀಠಾರೋಹಣ ಮಹೋತ್ಸವ ಆಮಂತ್ರಣವನ್ನು ನೀಡಿದರು. ಕೋಟಿ ಗೀತಾ ಲೇಖನ ಯಜ್ಞ ಯೋಜನೆಯ ಅಂಗವಾಗಿ ಭಕ್ತರಿಗೆ ಭಗವದ್ಗೀತೆ ಪುಸ್ತಕ ವಿತರಿಸಿದರು.
ಬಂಟ್ವಾಳ ತುಳು ಶಿವಳ್ಳಿ ಸಂಘ ಅಧ್ಯಕ್ಷ ರಾಜಾರಾಮ್ ಭಟ್, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕೆ ರಾಜಾರಾಮ್ ಐತಾಳ, ರಾಜಮಣಿ ರಾಮಕುಂಜ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button