ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ…

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳದಲ್ಲಿ 75 ನೆಯ ಸ್ವಾತಂತ್ರ್ಯ ಅಮೃತ ಮಹೊತ್ಸವ ಸಮಿತಿ, ಎನ್ ಎಸ್ ಎಸ್ , ರೇಂಜರ್ ರೊವರ್ಸ್, ಸಮಾಜಶಾಸ್ತ್ರ ಸಂಘದ ಮತ್ತು ಯುವ ಸ್ಪಂದನದ ಸಹಯೋಗದೊಂದಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಯುವ ಪ್ರವರ್ತಕರಾದ ಶ್ರೀ ಅಲ್ಲಾಭಕ್ಶ ಭಾಗವಹಿಸದರು ಮತ್ತು ಡಾ ಅಪರ್ಣಾ ಅಳ್ವ ಜೀವನ ಕೌಶಲ್ಯ ದ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ ಸತೀಶ್ ಪ್ರಾಂಶುಪಾಲರು, ಐ ಕ್ಯು ಎ ಸಿ ಸಂಚಾಲಕರು ಪ್ರೊ ನಂದಕಿಶೊರ್ , ಪ್ರೊ ಬಾಲಸುಬ್ರಹ್ಮಣ್ಯ , ಪ್ರೊ ವೈಶಾಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮತ್ತೊಮ್ಮೆ ಪ್ರೊ. ಹೈದರಾಲಿ ಜೀವನ ಶೈಲಿಯಲ್ಲಿ ಕೌಶಲ್ಯದ ನಿರ್ವಹಣೆ ಬಗ್ಗೆ ತಿಳಿಸಿದರು. ಡಾ ಅಪರ್ಣಾ ಆಳ್ವ ವಂದಿಸಿದರು.

Sponsors

Related Articles

Back to top button