ಕಾರ್ಗಿಲ್‌ ವಿಜಯ ದಿವಸ್‌ ಕಾರ್ಯಕ್ರಮ…

ಬಂಟ್ವಾಳ: ಸಿನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ, ರೋಟರಿ ಕ್ಲಬ್ ಬಂಟ್ವಾಳ ಸಹಯೋಗದೊಂದಿಗೆ ಗ್ರಾಮ ಪಂ. ಸಜಿಪ ಮುನ್ನೂರು ಇದರ ಸಭಾಂಗಣದಲ್ಲಿ ಜು. 26 ರಂದು ನಿವೃತ್ತ ಸೈನಿಕರನ್ನು ಸನ್ಮಾನಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವ ದಿವಸ್ ಆಚರಿಸಲಾಯಿತು.
ನೌಕಾದಳದ ಸೇವೆಯಿಂದ ನಿವೃತ್ತರಾದ ಕಮಾಂಡರ್ ವಸಂತ ರಾವ್ ಪೆರ್ನೆ ಮತ್ತು ನೌಕಾದಳದ ಅಲೆಗ್ಸಾಂಡರ್ ಲೋಬೋ ಇವರನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಸೀನಿಯರ್ ಛೇಂಬರ್ ಸ್ಥಾಪಕಾದ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ಸಮಾರಂಭ ಜರಗಿತು. ರೋಟರಿ ನಿಕಟಪೂರ್ವಾಧ್ಯಕ್ಷ ಗೋವರ್ಧನ ರಾವ್ ಅಭಿನಂದನ ಭಾಷಣ ಮಾಡಿದರು. ಕಾರ್ಗಿಲ್ ಯುದ್ದ ದ ಅನುಭವವನ್ನು ವಸಂತ ರಾವ್ ಮತ್ತು ಅಲೆಗ್ಸಾಂಡರ್ ಲೋಬೊ ಅನುಭವ ಹಂಚಿಕೊಂಡರು. ಕ್ಲಬ್ ಮೊಡಂಕಾಪು ಅಧ್ಯಕ್ಷ ಪಿ.ಎ. ರಹೀಂ ಸ್ವಾಗತಿಸಿದರು. ಗ್ರಾಮ ಪಂ ಸದಸ್ಯ ಸಂದಿಪ್ ಕುಮಾರ್ , ಸಾಮಾಜಿಕ‌ ಮುಂದಾಳು ಸುಬ್ರಮಣ್ಯ ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು. ವಿಲ್ಮ ಪ್ರಾರ್ಥಿಸಿದರು. ಸೀನಿಯರ್ ಛೇಂಬರ್ ಉಪಾಧ್ಯಕ್ಷ ಆದಿರಾಜ್ ಜೈನ್ ವಂದಿಸಿದರು.

whatsapp image 2023 07 27 at 5.55.20 pm (1)
Sponsors

Related Articles

Back to top button