ಅಯೋಧ್ಯೆ ಕರಸೇವೆ – ಮಾಣಿಯ ಮಹಿಳೆಯರು ಭಾಗಿ…

ಬಂಟ್ವಾಳ: ಅಯೋಧ್ಯೆಯಲ್ಲಿ 1992ಲ್ಲಿ ನಡೆದ ಕರಸೇವೆಯಲ್ಲಿ ಮಾಣಿಯಿಂದ ಕುಳ್ಳಾಜೆ ಉಷಾ ಸುಬ್ರಹ್ಮಣ್ಯ ಭಟ್ ಕೈಂತಜೆ ಇವರ ನೇತೃತ್ವದಲ್ಲಿ ಮಾತೆಯರು ಪಾಲ್ಗೊಂಡಿದ್ದರು.
ಬಂಟ್ಟಾಳ ನಗರ ಸಭೆಯ ಮಾಜಿ ಸದಸ್ಯೆ ಸುಗುಣ ನಾಯಕ್,ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶುಭಾಷಿಣಿ ಅಮರನಾಥ ಶೆಟ್ಟಿ, ಮಾನಸ ಶೆಟ್ಟಿ, ಸಾವಿತ್ರಿ ಭಗಿಣಿ ಹೊನ್ನಾವರ ಹಾಗೂ ಭರಣಿಕೆರೆ ಮಧುಸೂದನ ಭಟ್ ತಂಡದಲ್ಲಿದರು.ಮಂಗಳೂರು ಸಂಘನಿಕೇತನದಿಂದ 30 ಮಾತೆಯರ ಜೊತೆಗೆ ಅಯೋಧ್ಯೆಯಲ್ಲಿ ಕರಸೇವೆ ಮಾಡಿದ ರೋಚಕ ಅನುಭವವನ್ನು‌ ವ್ಯಕ್ತಪಡಿಸಿದ್ದಾರೆ.ಅವರ ತಂಡವನ್ನು ಮಾಣಿ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಪೂಜೆ ನೆರವೇರಿಸಿ ಊರಿನ ಹಿರಿಯರು ಅಭಿಮಾನದಿಂದ ಬೀಳ್ಕೊಟ್ಟಿರುವ ಭಾವಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ.

Sponsors

Related Articles

Back to top button