ಸುಳ್ಯ ಪ್ರೆಸ್‌ ಕ್ಲಬ್‌ ಕಟ್ಟಡಕ್ಕೆ ಕೆಪಿಸಿಸಿ ಸಂಯೋಜಕ ಹೆಚ್‌.ಎಂ.ನಂದಕುಮಾರ್‌ ಅವರಿಂದ ಒಂದು ಲಕ್ಷ ರೂ ದೇಣಿಗೆ…

ಸುಳ್ಯ: ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷ ಹಾಗು ಕೆಪಿಸಿಸಿ ಸಂಯೋಜಕರಾದ ಹೆಚ್‌.ಎಂ.ನಂದಕುಮಾರ್‌ ಮಡಿಕೇರಿ ಅವರು ಸುಳ್ಯ ಪ್ರೆಸ್‌ ಕ್ಲಬ್‌ ಕಟ್ಟಡಕ್ಕೆ ಒಂದು ಲಕ್ಷ ಸಹಾಯ ಧನ ನೀಡಿದ್ದಾರೆ.
ಪ್ರೆಸ್‌ ಕ್ಲಬ್‌ ಪದಾಧಿಕಾರಿಗಳಿಗೆ ಅವರು ಒಂದು ಲಕ್ಷ ರೂ ಸಹಾಯ ಧನ ಹಸ್ತಾಂತರಿಸಿದರು. ಸುಳ್ಯದ ಅಂಬೆಟಡ್ಕದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನ ಪ್ರೆಸ್‌ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾಮಗಾರಿಯನ್ನು ವೀಕ್ಷಿಸಿದರು.
ಪ್ರೆಸ್‌ ಕ್ಲಬ್‌ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿದರು. ಪ್ರೆಸ್‌ ಕ್ಲಬ್‌ ಕಾಮಗಾರಿ ಪೂರ್ತಿಗೊಳ್ಳುವ ತನಕ ಜೊತೆಯಲ್ಲಿದ್ದು ಎಲ್ಲಾ ರೀತಿಯಲ್ಲಿಯೂ ಸಹಾಯ ನೀಡುವುದಾಗಿ ಅವರು ಹೇಳಿದರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಹರೀಶ್‌ ಬಂಟ್ವಾಳ್‌, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ನಿರ್ದೇಶಕರಾದ ಗಂಗಾಧರ ಮಟ್ಟಿ, ಜೆ.ಕೆ.ರೈ, ಜಯಪ್ರಕಾಶ್‌ ಕುಕ್ಕೆಟ್ಟಿ, ಶರೀಫ್‌ ಜಟ್ಟಿಪಳ್ಳ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಶಚಜೆ, ಪ್ರೆಸ್‌ ಕ್ಲಬ್‌ ಸದಸ್ಯರಾದ ತೇಜೇಶ್ವರ ಕುಂದಲ್ಪಾಡಿ, ಸತೀಶ್‌
ಹೊದ್ದೆಟ್ಟಿ, ಹಸೈನಾರ್‌ ಜಯನಗರ, ರಮೇಶ್‌ ನೀರಬಿದಿರೆ, ವೆಂಕಟೇಶ್‌ ಮೇನಾಲ, ಜಗತ್‌ ದೇರಾಜೆ, ಕಾಂಗ್ರೆಸ್‌ ಮಾಧ್ಯಮ ವಕ್ತಾರ ಭವಾನಿಶಂಕರ ಕಲ್ಮಡ್ಕ ಮತ್ತಿತರರು ಉಪಸ್ಥಿತರಿದ್ದರು.

Sponsors

Related Articles

Back to top button