ಉಪನ್ಯಾಸಕಿ ದೇವಕಿ ಪ್ರಸನ್ನ ಜಿ.ಎಸ್. ಅವರಿಗೆ ಡಾಕ್ಟರೇಟ್ ಪದವಿ….

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಪದವಿ ಕಾಲೇಜಿನ ಹಿಂದಿ ಉಪನ್ಯಾಸಕಿ ದೇವಕಿ ಪ್ರಸನ್ನ ಜಿ.ಎಸ್. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
‘ಮಧು ಕಾಂಕರಿಯಾ ಕೆ ಕಥಾ ಸಾಹಿತ್ಯ ಮೆ ಮಾನವೀಯ ಸಂವೇದನಾ’ ಎನ್ನುವ ವಿಷಯದ ಬಗ್ಗೆ ಡಾ.ಪ್ರಭಾ.ವಿ.ಭಟ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ದೇವಕಿ ಪ್ರಸನ್ನ ಅವರು ಪ್ರಬಂಧ ಮಂಡಿಸಿದ್ದರು.
ಅವರು ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ ಸಂತೋಷ್ ಕುಮಾರ್ ಅವರ ಪತ್ನಿ ಹಾಗು ಸುಳ್ಯ ಕೇರ್ಪಳದ ನಿವೃತ್ತ ಶಿಕ್ಷಕ ಜಿ.ಶಂಕರನಾರಾಯಣ ಮತ್ತು ವಿಜಯಲಕ್ಷ್ಮಿ ಅವರ ಪುತ್ರಿ.

Sponsors

Related Articles

Leave a Reply

Your email address will not be published. Required fields are marked *

Back to top button