ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿ ಅಧಿಕಾರ ಸ್ವೀಕಾರ ಸಮಾರಂಭ – ಅರಂತೋಡಿನಲ್ಲಿ ಪೂರ್ವಭಾವಿ ಸಭೆ…

ಸುಳ್ಯ: ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ .ಶಿವಕುಮಾರ್ ರವರ ಅಧಿಕಾರ ಸ್ವೀಕಾರ ಸಮಾರಂಭದ ಪೂರ್ವಭಾವಿ ಸಭೆ, ಅರಂತೋಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಅರಂತೋಡು ತೆಕ್ಕಿಲ್ ಹಾಲ್ ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು .
ಕಾರ್ಯ ಕ್ರಮದ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಪ್ರಮುಖ ಭವಾನಿಶಂಕರ ಕಲ್ಮಡ್ಕ ನೀಡಿದರು.ಈ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಮಹೇಶ್ ರೈ ಅಂಕೋತ್ತಿಮಾರ್, ಗೀತಾ ಕೋಲ್ಚಾರು , ರಾಜಾರಾಮ್ ಭಟ್ ಬೆಟ್ಟ , ಸಂಶುದ್ದೀನ್, ಜನಾರ್ದನ ಅಡ್ಕಬಾಳೆ , ಮುಸ್ತಫಾ ಸುಳ್ಯ , ಪಿ ಎಸ್ ಗಂಗಾದರ , ಮಹಮ್ಮದ್ ಗೂನಡ್ಕ , ಕೇಶವ, ವೇದಿಕೆಯಲ್ಲಿದ್ದರು . ಕಾಂಗ್ರೆಸ್ ಮುಖಂಡರಾದ ಸುರೇಶ್ ಅಮೈ, ಮೂಸಾ ಪಿ ಎಂ , ಸುದೀರ್ ರೈ ಮೇನಾಲ , ಸಚಿನ್ ರಾಜ್ ಶೆಟ್ಟಿ , ನಂದರಾಜ ಸುಳ್ಯ , ತಿಮ್ಮಯ ತೊಡಿಕಾನ , ರವಿ ತೊಡಿಕಾನ , ಜುಬೈರ್ ಅರಂತೋಡು , ವಾಸು ಪುರ , ಕೊರಗಪ್ಪ ಮರ್ಕಂಜ , ಅನ್ನು ಕಟ್ಟಕೊಡಿ , ಜಯಂತಿ ಕೂಟೇಲು , ಯೋಗೀಶ್ವರಿ ತೊಡಿಕಾನ , ಸಂತೋಷ್ ಕಿರ್ಲಾಯ , ಅಣ್ಣಾದೊರೈ ತೊಡಿಕಾನ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು . ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button