ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಸಜಿಪನಡು ಪುನರ್ ನಿರ್ಮಾಣ…
![](wp-content/uploads/2022/03/a7ade498-a8d4-4ae8-bd76-6bdd47aa76ec-1-780x470.jpg)
ಬಂಟ್ವಾಳ: ಕುಂಜತ್ತಬೈಲು ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಸಜಿಪನಡು ಅಂದಾಜು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿದ್ದು, ವಾಸ್ತು ಶಾಸ್ತ್ರಜ್ಞ ಮುನಿಯಂಗಳ ಪ್ರಸಾದ್ ಭಟ್ ಭೇಟಿ ನೀಡಿ ಮಾರ್ಗದರ್ಶನ ನೀಡಿದರು.
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ , ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಯಶವಂತ ದೇರಾಜೆ, ವೆಂಕಪ್ಪ ನಾಯಕ್, ಸೋಮನಾಥ್ ಬಂಡಾರಿ, ಬಾಲಕೃಷ್ಣ ಅರಸ, ಪುರುಷ ನಾಯಕ್, ಹರೀಶ್ ಬಂಗೇರ, ನಿತಿನ್ ಅರಸ, ರಾಮ ಮೊದಲಾದವರು ಉಪಸ್ಥಿತರಿದ್ದರು.