ಉದ್ಯಮಿ ಅಬ್ದುಲ್ ಲತೀಫ್ ಹತ್ಯೆ ಪ್ರಕರಣ – ನಾಲ್ವರ ಬಂಧನ…

ಮಂಗಳೂರು: ಮೂಲ್ಕಿ ಜಂಕ್ಷನ್ ಸಮೀಪದ ಬ್ಯಾಂಕ್ ಮುಂಭಾಗ ಶುಕ್ರವಾರ ಸಂಜೆ ಮೂಡಬಿದ್ರೆಯ ಜ್ಯುವೆಲ್ಲರಿ ಮಾಲಕ ಅಬ್ದುಲ್ ಲತೀಫ್ ಎಂಬುವವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮುಲ್ಕಿ ಕಾರ್ನಾಡ್ ಬಪ್ಪನಾಡುವಿನ ಮೊಹಮ್ಮದ್ ಹಾಸಿಮ್(27), ಬಪ್ಪನಾಡುವಿನ ರಿಯಾಝ್(33), ಉಡುಪಿ ಉಚ್ಚಿಲದ ಅಬೂಬಕ್ಕರ್ ಸಿದ್ಧಿಕ್ (27), ಬಪ್ಪನಾಡುವಿನ ಮೊಹಮ್ಮದ್ ರಾಝಿಂ (24) ಎಂದು ಗುರುತಿಸಲಾಗಿದೆ.

ದರ್ಗಾ ರೋಡ್ ನಿವಾಸಿ ಕಾಂಗ್ರೆಸ್ ಮುಖಂಡ ಮುನೀರ್ ಮೇಲೆ ಕಾರ್, ಬೈಕ್‍ಗಳಲ್ಲಿ ಬೆನ್ನಟ್ಟಿ ಬಂದಿದ್ದ 9 ಮಂದಿ ದುಷ್ಕರ್ಮಿಗಳು ಬ್ಯಾಂಕ್ ಮುಂಭಾಗ ದಾಳಿ ನಡೆಸಿದ್ದರು. ಆಗ ಮುನೀರ್ ಅವರ ಅಳಿಯ ಅಬ್ದುಲ್ ಲತೀಫ್ ತಡೆಯಲು ಬಂದ್ದಿದ್ದರಿಂದ ಅವರ ಮೇಲೂ ಹಾಗೂ ಮುನೀರ್ ಅವರ ಮಗ ಇಯಾಜ್ ಮೇಲೂ ಹಲ್ಲೆ ನಡೆಸಿ ತಂಡ ಪರಾರಿಯಾಗಿತ್ತು.
ಲತೀಫ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button