ಕೂಲಿಶೆಡ್ ಬಳಿ ಆಕಸ್ಮಿಕವಾಗಿ ಬೆಂಕಿಗೆ ಅಹುತಿಯಾದ ಕಟ್ಟಡ ಪುನರ್ ನಿರ್ಮಾಣ…

ಸುಳ್ಯ: ಸಂಪಾಜೆ ಗ್ರಾಮದ ಕೂಲಿಶೆಡ್ ಬಳಿ ಆಕಸ್ಮಿಕವಾಗಿ ಬೆಂಕಿಗೆ ಅಹುತಿಯಾದ ಕಟ್ಟಡ ಪುನರ್ ನಿರ್ಮಾಣಗೊಂಡು ನೂತನವಾಗಿ ಮಹಮ್ಮದ್  ಕುಂಞ ಸೋಡಾರವರ ಕಟ್ಲೆರಿ ಜ್ಯೂಸ್ ಅಂಗಡಿ ಉದ್ಘಾಟನೆಗೊಂಡ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಾಹಿದ್ ತೆಕ್ಕಿಲ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಕಲ್ಲುಗುಂಡಿ ಸೊಸೈಟಿ ನಿರ್ದೇಶಕರಾದ ಆನಂದ ಗೌಡ, ಗುತ್ತಿಗೆದಾರ ರಿಯಾಜ್ ಸಂಟ್ಯಾರ್, ಸುಳ್ಯ ತಾಲೂಕು ಯುವ ಕಾಂಗ್ರೆಸ್ ಕಾರ್ಯದರ್ಶಿ ರೋಡಲ್ಪ್ ಕ್ರಾಸ್ತಾ, ಚರ್ಚ್ ಪಾಲನ ಸಮಿತಿ ಮಾಜಿ ಉಪಾಧ್ಯಕ್ಷರಾದ ಜಾಕೊಬ್ ಡಿಸೋಜಾ, ಗುತ್ತಿಗೆದಾರ ಆಶಿಕ್ ಸಂಟ್ಯಾರ್, ಮೊಂತೇರೋ ಟಯರ್ ಅಂಗಡಿ ಮಾಲಕ ಲಿಗೋರಿ ಮೊಂತೆರೋ, ಕೆ. ಟಿ. ಅಬೂಬಕ್ಕರ್ ದರ್ಕಾಸ್ ಭೇಟಿ ನೀಡಿ ಶುಭಾಶಯ ಸಲ್ಲಿಸಿದರು.

Sponsors

Related Articles

Back to top button