ಪೆರಾಜೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆರಾಜೆ ಇದರ ವ್ಯವಸ್ಥಾಪನಾ ಸಮಿತಿ ಅಧಿಕಾರ ಸ್ವೀಕಾರ…

ಬಂಟ್ವಾಳ: ಪೆರಾಜೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆರಾಜೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸ ಪೂಜಾರಿ ಮಿತ್ತಪೆರಾಜೆ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿಯನ್ನು ನೇಮಕ ಮಾಡಿ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆ ಆದೇಶ ನೀಡಿತ್ತು.
ಕಾರ್ಯದರ್ಶಿಯಾಗಿ ಕೆ.ತನಿಯಪ್ಪ ನಾಯ್ಕ ಕೊಂಕಣಪದವು, ಕೋಶಾಧಿಕಾರಿಯಾಗಿ ಯತಿರಾಜ ಪಿ. ಉಪಾಧ್ಯಕ್ಷರಾಗಿ ಆನಂದ ಶೆಟ್ಟಿ ಪಾನೂರು, ಜತೆ ಕಾರ್ಯದರ್ಶಿಯಾಗಿ ಜನಾರ್ದನ ಗೌಡ ಶಾಂತಿಲ ಹಾಗೂ ಸಮಿತಿ ಸದಸ್ಯರಾಗಿ ಪುರುಷೋತ್ತಮ ಮಡಲ , ರತ್ನ ಮಂಜೊಟ್ಟಿ, ಭಾರತಿ ಗೌಡ ಜೋಗಿಬೆಟ್ಟು, ಸಮಿತಿ ಜವಾಬ್ದಾರಿ ನೀಡಲಾಗಿದೆ.
ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಮಿತಿ ಸದಸ್ಯರಾದ ಗಿರಿಪ್ರಕಾಶ್ ತಂತ್ರಿ ಪೊಳಲಿ, ಪ್ರಮುಖರಾದ ಬಿ.ಟಿ.ನಾರಾಯಣ ಭಟ್, ಹರೀಶ್ ರೈ ಪಾನೂರು ನಿತಿನ್ ಪೂಜಾರಿ ಅರ್ಬಿ,ಅರ್ಚಕರಾದ ಶ್ರೀವತ್ಸ ಕಡೇಶಿವಾಲಯ, ಆಡಳಿತಾಧಿಕಾರಿ ಗ್ರಾಮಕರಣಿಕರಾದ ಸುರಕ್ಷಾ ಅಂಚನ್ ಉಪಸ್ಥಿತರಿದ್ದರು.

Sponsors

Related Articles

Back to top button