ಸಂಪಾಜೆ ಗ್ರಾಮ ಸಭೆಯನ್ನು ಅಮಾನ್ಯ ಗೊಳಿಸಿ ಮತ್ತೊಮ್ಮೆ ಗ್ರಾಮ ಸಭೆ ನಡೆಸುವಂತೆ ಎಸ್ಡಿಪಿಐ ಮನವಿ…

ಸುಳ್ಯ: 2022 ಜನವರಿ 11 ರಂದು ಸಂಪಾಜೆ ಗ್ರಾಮ ಪಂಚಾಯತ್ ನಡೆಸಿದ ಗ್ರಾಮ ಸಭೆಯು ಪಂಚಾಯತ್ ರಾಜ್ ಅಧಿನಿಯಮದಂತೆ ಸಾರ್ವಜನಿಕರ ಪ್ರಶ್ನೆಗಳಿಗೆ ಅವಕಾಶ ನೀಡಿರುವುದಿಲ್ಲ. ವರದಿ ವಾಚನವಾದ ನಂತರ ವರದಿಗೆ ಸಂಭಂದಪಟ್ಟ ವಿಷಯದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಕೇಳಲು ಸಾರ್ವಜನಿಕರಿಗೆ (ಗ್ರಾಮಸ್ಥರಿಗೆ) ಅವಕಾಶ ನೀಡಿ ಆದರ ನಂತರ ಇಲಾಖಾಧಿಕಾರಿಗಳಲ್ಲಿ ಪ್ರಶ್ನೆಗಳನ್ನು ಕೇಳಲು ಹಾಗೂ ಗ್ರಾಮಸ್ಥರ ಸಮಸ್ಯೆ ಗಳನ್ನು ಕೇಳಲು ನೋಡಲ್ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಕೆಲವು ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯತೆ ಕೂಡ ಅಧಿಕಾರಿಗಳು ತೋರಿಸಲಿಲ್ಲ. ವೇದಿಕೆಯಲ್ಲಿ ಕುಳಿತ ಜನಪ್ರತಿನಿಧಿಗಳು ತಮಗೆ ಇಷ್ಟ ಬಂದ ಹಾಗೆ ಸಭೆಯನ್ನು ಮುಗಿಸಿದರು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನೋಡಲ್ ಅಧಿಕಾರಿ ಗಳಾದ ಶ್ರೀಮತಿ ಸುಹಾನ ಪಿ. ಕೆ. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ತೋಟಗಾರಿಕಾ ಇಲಾಖೆ ಸುಳ್ಯ ಇವರಿಗೆ ಕಷ್ಟ ಆದಾಗ ಏಕಾ ಏಕಿ ಎದ್ದು ನಿಂತು ರಾಷ್ಟ್ರ ಗೀತೆ ಹಾಡಿ ಸಭೆಯನ್ನು ಕೊನೆಗೊಳ್ಳಿಸಿದ್ದು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆ. ಗ್ರಾಮಸ್ಥರಿಗೆ ಅಪರೂಪವಾಗಿ ಸಿಗುವ ಅವಕಾಶವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಕಸಿದುಕೊಂಡಿದ್ದು, ಇದು ಸಂಪೂರ್ಣವಾಗಿ ಪಂಚಾಯತ್ ರಾಜ್ ವ್ಯವಸ್ಥೆಗೆ ವಿರೋಧವಾಗಿದೆ. ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಿದಂತಿದೆ. ಆದುದರಿಂದ ಸಂಬಂಧಪಟ್ಟವರು ಕೂಡಲೇ ಈ ಮೊದಲು ನಡೆದ ಗ್ರಾಮ ಸಭೆಯನ್ನು ಅಮಾನ್ಯ ಗೊಳಿಸಿ, ತುರ್ತಾಗಿ ಮತ್ತೊಂದು ಗ್ರಾಮ ಸಭೆಯನ್ನು ಕರೆಯಬೇಕೆಂದು ಆಗ್ರಹಿಸಿ ಎಸ್ಡಿಪಿಐ ಸಂಪಾಜೆ ವಲಯ ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿ ಸದಸ್ಯರಾದ ಅಶ್ರಫ್ ಟರ್ಲಿ, ಕಡೇಪಾಲ ಬೂತ್ ಅಧ್ಯಕ್ಷರಾದ ಸಾಜಿದ್ ಐ ಜಿ, ಕಾರ್ಯಕರ್ತರಾದ ಸಲೀಮ್ ದರ್ಕಾಸ್, ಮರ್ಜೂಕ್ ಕಡೆಪಾಲ ಉಪಸ್ಥಿತರಿದ್ದರು.

Sponsors

Related Articles

Back to top button