ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪಾಡಿ – ಬಾಲಗಣಪತಿ ಹೋಮ…

ಬಂಟ್ವಾಳ: ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪಾಡಿ ಸಜಿಪಮೂಡ ಇದರ ನವೀಕರಣ ಪ್ರತಿಷ್ಠಾಪನ ಅಷ್ಟಬಂಧ ಬ್ರಹ್ಮಕಲಶೋತ್ಸವ ನಿಮಿತ್ತ ಶ್ರೀಕ್ಷೇತ್ರದಲ್ಲಿ ಬಾಲಗಣಪತಿ ಹೋಮ ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯುಕ್ತವಾಗಿ ಜರುಗಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಎಸ್. ಕೆ ಸದಾನಂದ ಶೆಟ್ಟಿ, ಸುರೇಶ್ ಪೂಜಾರಿ, ಸುರೇಶ್ ಬಂಗೇರ, ಹರೀಶ್ ಬಂಗೇರ, ದೇವದಾಸ, ಪದ್ಮಾವತಿ, ರಮೇಶ, ಲಿಂಗಪ್ಪ ದೋಟ , ಜಯಪ್ರಕಾಶ್, ಎಂ ಶಂಕರನಾರಾಯಣ ಭಟ್, ಗಣೇಶ್ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button