ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಜೀಪಮುನ್ನೂರು – ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆ…

ಬಂಟ್ವಾಳ: ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಜೀಪಮುನ್ನೂರು ಇಲ್ಲಿ ನವಂಬರ 28 ಮತ್ತು 29 ರಂದು ನಡೆಯಲಿರುವ ವಾರ್ಷಿಕ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಸೆ.11 ರಂದು ದೇವಸ್ಥಾನದ ಪಠಾರದಲ್ಲಿ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸಮಿತಿ ಸದಸ್ಯರಾದ ಕೃಷ್ಣ ಭಟ್, ಎನ್ ಕೆ ಶಿವ, ಹರಿಪ್ರಸಾದ್ ಭಂಡಾರಿ, ಚಿತ್ರ ಎಸ್ ರೈ, ಶ್ರೀನಿವಾಸ್ ನಾಯಕ್, ದೀಕ್ಷಿತ್ ಶೆಟ್ಟಿ, ಧನೇಶ್ವರ ರಾವ್, ವಿನೋದ್ ನಾಯ್ಕ್, ಉಮೇಶ್ ರಾವ್, ಪ್ರಸಾದ್ ನಾಯ್ಕ್, ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ, ಧನಂಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button