ಅರಂತೋಡು- ತೆಕ್ಕಿಲ್ ಸಮುದಾಯಭವನ ಎದುರು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ…

ಸುಳ್ಯ: ಅರಂತೋಡು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪ ತೆಕ್ಕಿಲ್ ಸಮುದಾಯ ಭವನ ಮುಂಭಾಗದಲ್ಲಿರುವ ವಿದ್ಯುತ್ ಕಂಬದಿಂದ ಶಾರ್ಟ್ ಸರ್ಕ್ಯೂಟ್‌ ನಿಂದಾಗಿ ಬೆಂಕಿ ಅವರಿಸಿದೆ.
ಸಮುದಾಯ ಭವನದ ಕೆಲಸಗಾರನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಹೆಚ್.ಪಿ.ಗ್ಯಾಸ್ ಕಚೇರಿ ಮ್ಯಾನೇಜರ್ ಧನುರಾಜ್ , ಸಮುದಾಯ ಭವನ ಮೇಲ್ವಿಚಾರಕ ಲತೀಫ್, ಅಶೀಕ್ ಕುಕ್ಕುಂಬಳ, ಉಮ್ಮರ್ ಎ ಹಾಗೂ ತಾಜುದ್ದಿನ್ ಅರಂತೋಡು ವಿಷಯ ತಿಳಿದ ತಕ್ಷಣ ಧಾವಿಸಿ, ಬೆಂಕಿ ನಂದಿಸಲು ಸಹಕರಿಸಿದರು.

Sponsors

Related Articles

Back to top button