ಶಾಂತಾ ಪುತ್ತೂರುರವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ 2024 …

ಪುತ್ತೂರು: ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಅವರ ಜೊತೆ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ) ಕಥಾಬಿಂದು ಪ್ರಕಾಶನ ಇವರ ಜಂಟಿ ಆಶ್ರಯದಲ್ಲಿ ಮಾ. 10ರಂದು ಕೇರಳ ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ 2024, ಗಣ್ಯರಿಗೆ ಪ್ರಶಸ್ತಿ ಪ್ರದಾನ , ಕವಿಗೋಷ್ಠಿ,ಕೃತಿಬಿಡುಗಡೆ ಕಾರ್ಯಕ್ರಮ ಕನ್ನಡ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆ ನೆಲೆಯಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಬೊಳುವಾರು ನಿವಾಸಿ ಶಾಂತಾ ಪುತ್ತೂರು ರವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿ ಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ 2024ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಭವನದ ಸ್ಥಾಪಕಾಧ್ಯಕ್ಷ ರಾದ ವಾಮನ್ ರಾವ್ ಬೇಕಲ್, ಕಥಾಬಿಂದು ಪ್ರಕಾಶನ ದ ಅಧ್ಯಕ್ಷ ರಾದ ಪಿ.ವಿ ಪ್ರದೀಪ್ ಕುಮಾರ್, ಸಾಹಿತಿ ಕೊಳ್ಚಪ್ಪೆಗೋವಿಂದ ಭಟ್, ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತಡ್ಕ, ಕನ್ನಡ ಭವನದ ಸಂಧ್ಯಾರಾಣಿ ಟೀಚರ್,ವಿಶಾಲಾಕ್ಷ ಪುತ್ರಕಳ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಕೇರಳ ಗಡಿನಾಡ ಘಟಕ, ಸಾಹಿತಿ ವಿ.ಬಿ.ಕುಳಮರ್ವ, ಸಾಹಿತಿ ಬಿ ಸತ್ಯವತಿ ಭಟ್ ಕೊಳಚಪ್ಪೆ,ಪ್ರೊ ಶ್ರೀನಾಥ್ ಕಾಸರಗೋಡು, ಧಾರ್ಮಿಕ ಮುಂದಾಳು ಶ್ರೀಮಾನ್ ವೆಂಕಟರಮಣ ಹೊಳ್ಳ ಕಾಸರಗೋಡು, ಪ್ರದೀಪ್ ಬೇಕಲ್,ವಸಂತ ಕೆರೆಮನೆ, ಸಾಹಿತಿ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

whatsapp image 2024 03 09 at 9.59.57 pm

whatsapp image 2024 03 11 at 7.14.13 pm

Sponsors

Related Articles

Back to top button