ಹೊಸಬೆಟ್ಟು ಶ್ರೀಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಸೂರ್ಯ ಗ್ರಹಣ ಶಾಂತಿ ಹೋಮ…

ಮಂಗಳೂರು: ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು ಇದರ ವತಿಯಿಂದ ಹೊಸಬೆಟ್ಟು ಶ್ರೀಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ವೇದಮೂರ್ತಿ ಚಿತ್ರಾಪುರ ಕಗ್ಗಿ ಶ್ರೀನಿವಾಸ ಆಚಾರ್ಯ ಮತ್ತು ವೇದಮೂರ್ತಿ ಕೋಟೆಕಾರ್ ಶ್ರೀಕಾಂತ್ ಭಟ್ ರವರ ಪೌರೋಹಿತ್ಯದಲ್ಲಿ ಲೋಕ ಕಲ್ಯಾಣರ್ಥಕ್ಕಾಗಿ ಜೂ.21 ರ ಜೇಷ್ಠ ಕೃಷ್ಣ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಸಂದರ್ಭದಲ್ಲಿ ಸೂರ್ಯ ಗ್ರಹಣ ಶಾಂತಿ ಹೋಮ, ನವಗ್ರಹ ದೇವರಿಗೆ, ಪಂಚಮುಖೀ ಆಂಜನೇಯ ದೇವರಿಗೆ ಅಷ್ಟೋತ್ತರ ಅರ್ಚನೆ ಹಾಗೂ ಹರಿ ವಾಯು ಗುರುಗಳಿಗೆ ಪ್ರಸನ್ನ ಪೂಜೆ ನಡೆಯಿತು.
ಪ್ರತಿಷ್ಠಾನದ ಅನುವಂಶಿಕ ಆಡಳಿತ ಮೊಕ್ತೇಸರ ರಾದ ಶ್ರೀ ರಾಘವೇಂದ್ರ ಯಚ್ ವಿ, ಅಗರಿ ಸಮೂಹ ಸಂಸ್ಥೆಗಳ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೊಸಬೆಟ್ಟು ನ ಅಧ್ಯಕ್ಷ ರಾದ ಶ್ರೀ ಹರಿಕೃಷ್ಣ ಸಾಲ್ಯಾನ್, ಶ್ರೀಮತಿ ಕೆ ಕಲಾವತಿ, ಶ್ರೀ ನಾಗರಾಜ ರಾವ್ ಹೊನ್ನಕಟ್ಟೆ, ಶ್ರೀ ಹರಿಶ್ಚಂದ್ರ ಹೊಸಬೆಟ್ಟು, ಶ್ರೀ ನಾಗರಾಜ ಬಳ್ಳಕ್ಕರಾಯರು, ಶ್ರೀ ಶ್ರೀನಿವಾಸ ಕುಳಾಯಿ, ಶ್ರೀಮತಿ ಲೀಲಾ ಆರ್ ರಾವ್, ಶ್ರೀಮತಿ ಗೌರಿ ರಾಘವೇಂದ್ರ ರಾವ್, ಶ್ರೀಮತಿ ಕುಸುಮ ವಾದೀಶಾಚಾರ್ ಹೊಸಬೆಟ್ಟು, ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಕೊರೊನ ಸಮಸ್ಯೆ ನಿರ್ಮೂಲನೆ ಆಗಲಿ ,ಸರ್ವರಿಗೂ ಅರೋಗ್ಯವನ್ನು ಹರಿ ವಾಯು ಗುರುಗಳು ಕರುಣಿಸಲಿ ಎಂದು ಸಾಮೂಹಿಕ ಪ್ರಾರ್ಥನೆ ಯನ್ನು ಪುರೋಹಿತರಾದ ವೇದಮೂರ್ತಿ ಚಿತ್ರಾಪುರ ಕಗ್ಗಿ ಶ್ರೀನಿವಾಸ ಆಚಾರ್ಯರವರು ನೆರವೇರಿಸಿ, ಆಶೀರ್ವಚನ ನೀಡಿದರು.

Sponsors

Related Articles

Leave a Reply

Your email address will not be published. Required fields are marked *

Back to top button