ಸುಳ್ಯ – ಆಲೆಟ್ಟಿ ಕಾಂಗ್ರೆಸ್ ಮುಖಂಡರ ಮನೆ ಭೇಟಿ…

ಸುಳ್ಯ: ಕೆಲವು ದಿನಗಳ ಮುಂದೆ ನಿಧನರಾದ ಅಲೆಟ್ಟಿಯ ಕಾಂಗ್ರೆಸ್ ಮುಖಂಡರಾದ ಕೆ ಆರ್ ಜಾಹರ್ ರವರ ಮನೆಗೆ ಭೇಟಿ ನೀಡಿ ಅವರ ಸಹೋದರರಾದ ತೇಜಪ್ರಸಾದ್ , ವಕೀಲರಾದ ವಿದ್ಯಾಧರ ಹಾಗು ಕುಟುಂಬಸ್ಥರೊಂದಿಗೆ ಮಾತನಾಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾನವ ಹಕ್ಕು ಮತ್ತು ಕಾನೂನು ವಿಭಾಗದ ಅಧ್ಯಕ್ಷರು ಹಾಗು ಕೆಪಿಸಿಸಿ ವಕ್ತಾರರಾಗಿರುವ ಕೆ ಎಸ್ ಪೊನ್ನಣ್ಣ , ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಟಿ ಎಂ ಶಾಹೀದ್ ತೆಕ್ಕಿಲ್, ವೆಂಕಪ್ಪ ಗೌಡ, ಹೈಕೋರ್ಟ್ ವಕೀಲರಾದ ವಿಕ್ರಂ, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸೂರಜ್ ಹೊಸೂರ್ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ರಮಾನಾಥ್ ಬೇಕಲ್, ಮದೆನಾಡು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಪಿ ಕೆ ಅಬುಶಾಲಿ ಗೂನಡ್ಕ ಮತ್ತು ಕಾಂಗ್ರೆಸ್ ಕಾರ್ಯಕರ್ತ ಅಯ್ಯುಬ್ ಗೂನಡ್ಕ ಉಪಸ್ಥಿತರಿದ್ದರು.

Sponsors

Related Articles

Back to top button