ಯುಎಇ ಗಮ್ಮತ್ ಕಲಾವಿದರಿಂದ “ವಾ ಗಳಿಗೆಡ್ ಪುಟ್ಟುದನಾ” ನಾಟಕ…

ನಾಟಕಕಾರ ಸಂದೀಪ್ ಶೆಟ್ಟಿಗೆ ಸನ್ಮಾನ...

ಬಂಟ್ವಾಳ: ಕೊಲ್ಲಿ ರಾಷ್ಟ್ರದ ಯುಎಇಯ ಗಮ್ಮತ್ ಕಲಾವಿದೆರ್ ನಾಟಕ ಸಂಘದ ವತಿಯಿಂದ ರಂಗಭೂಮಿ ಕಲಾವಿದ, ಬಂಟ್ವಾಳ ತಾಲೂಕಿನ ರಾಯಿ ಸಂದೀಪ್ ಶೆಟ್ಟಿ ರಚನೆಯ “ವಾ ಘಳಿಗೆಡ್ ಪುಟ್ಟುದನಾ” ತುಳು ನಾಟಕ ದುಬೈನ ಎಮಿರೇಟ್ಸ್ ಥಿಯೇಟರ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಾಟಕ ರಚನೆಕಾರ ಸಂದೀಪ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪ್ರಮುಖರಾದ ಸರ್ವೋತ್ತಮ್ ಶೆಟ್ಟಿ, ಹರೀಶ್ ಶೇರಿಗಾರ್, ಪ್ರವೀಣ್ ಕುಮಾರ್ ಶೆಟ್ಟಿ , ಸಂದೀಪ್ ರೈ, ನಂಜೆ, ಜೋಸೆಫ್ ಮಾತಾಯಿಸ್, ಹರೀಶ್ ಬಂಗೇರ, ಡಯಾನ್ ಡಿಸೋಜಾ , ಜೇಮ್ಸ್ ಮೆಂಡೋನ್ಸಾ, ಮನೋಹರ್ ತೋನ್ಸೆ, ಸಂಘದ ಅಧ್ಯಕ್ಷ ರಾಜೇಶ್ ಕುತ್ತಾರ್, ರಂಗ ನಿರ್ದೇಶಕ ವಿಶ್ವನಾಥ್ ಶೆಟ್ಟಿ, ಹಿರಿಯ ರಂಗ ಕರ್ಮಿ ಜಗದೀಶ್ ಶೆಟ್ಟಿ ಕೆಂಚನಕೆರೆ ಮತ್ತಿತರರು ಉಪಸ್ಥಿತರಿದ್ದರು.

whatsapp image 2024 03 20 at 5.37.27 pm (1)

Sponsors

Related Articles

Back to top button