ಮಾ|ಮನುಜ ನೇಹಿಗನಿಗೆ ಶೃಂಗೇರಿಯಲ್ಲಿ ಸನ್ಮಾನ…..

ಮೂಡುಬಿದ್ರಿ: ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ, ಶೃಂಗೇರಿ ವತಿಯಿಂದ ಏರ್ಪಡಿಸಲಾಗಿದ್ದ 60ನೇ ವರ್ಷದ ಗಣೇಶೋತ್ಸವದ ವೇದಿಕೆಯಲ್ಲಿ ಆಳ್ವಾಸ್ ಪ್ರತಿಭೆ, ಸುಳ್ಯ ರಂಗಮನೆಯ ಮಾ|ಮನುಜ ನೇಹಿಗ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗಣೇಶೋತ್ಸವದ ಅಂಗವಾಗಿ ಪದ್ಮಶ್ರೀ ಡಾ|ವಿ.ಆರ್.ಗೌರಿಶಂಕರ್ ವೇದಿಕೆಯಲ್ಲಿ ಮನುಜ ನೇಹಿಗ ಅವರಿಂದ ‘ದಶ ಕಲಾ ಕೌಶಲ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಾದೂ,ಯಕ್ಷಗಾನ, ರಷ್ಯನ್ ರಿಂಗ್, ಡ್ಯಾನ್ಸ್, ಸಂಗೀತ ಪರಿಕರಗಳನ್ನು ನುಡಿಸುವುದು, ಹಿಂದೂಸ್ತಾನಿ ಸಂಗೀತ ಮುಂತಾದ ವಿವಿಧ ಕಲಾ ಪ್ರಕಾರಗಳನ್ನು ಸುಮಾರು ಒಂದು ಘಂಟೆಯ ಕಾಲ ಮನುಜ ನೇಹಿಗ ಒಬ್ಬರೇ ಪ್ರದರ್ಶಿಸಿದರು. ನಂತರ ಮಾ|ಮನುಜ ನೇಹಿಗ ಅವರನ್ನು ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ಶಾಸಕ ಟಿ.ಡಿ. ರಾಜೇಗೌಡ, ಮುತ್ತು .ಎಂ.ಶೆಟ್ಟಿ, ಶೃಂಗೇರಿ ಸುಬ್ಬಣ್ಣ ಮೊದಲಾದವರು ಉಪಸ್ಥಿತರಿದ್ದರು.
ಅಲ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿರುವ ಮನುಜ ನೇಹಿಗ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಮತ್ತು ಡಾ| ಮೌಲ್ಯ ಜೀವನ್ ದಂಪತಿಗಳ ಪುತ್ರ.

 

 

Sponsors

Related Articles

Leave a Reply

Your email address will not be published. Required fields are marked *

Back to top button