ವಿವಾಹಕೋಸ್ಕರ ಮತಾಂತರ ನಿಷೇಧ ಕಾಯ್ದೆ ತಕ್ಷಣ ಜಾರಿಗೆ ಟಿ.ಎಂ.ಶಾಹೀದ್ ಆಗ್ರಹ…

ಬೆಂಗಳೂರು : ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ವಿವಾಹಕೋಸ್ಕರ ಮತಾಂತರ ನಿಷೇಧ ಕಾಯ್ದೆಯನ್ನು ಕಾನೂನು ತಜ್ಞರ ಸಲಹೆಯೊಂದಿಗೆ ಸಾಮಾಜಿಕ,ಧಾರ್ಮಿಕ ಮುಖಂಡರುಗಳ ಸಲಹೆಯನ್ನು ಪಡೆದು ಎಲ್ಲಾ ಜಾತಿಯವರಿಗೆ ಅನುಕೂಲವಾಗುವಂತ ಕಾನೂನನ್ನು ಸಂವಿಧಾನದ ಚೌಕಟ್ಟಿನ ಒಳಗೆ ಜಾರಿಗೆ ತರಬೇಕೆಂದು ಕಾಂಗ್ರೇಸ್ ಮುಖಂಡ ಟಿ.ಎಂ.ಶಾಹೀದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ಸರಕಾರ ಇದರ ಒಳಿತು ಕೆಡುಕುಗಳ ಬಗ್ಗೆ ತಿಳಿದು ಕಾನೂನು ಜಾರಿಮಾಡಬೇಕು. ಯಾವುದೇ ದಬ್ಬಾಳಿಕೆ ಮಾಡದೆ ಸಮಾಜದಲ್ಲಿ ಶಾಂತಿ ಮತ್ತು ಸೌರ್ಹಾದತೆಗಾಗಿ ಜಾರಿ ಮಾಡಬೇಕು, ಹೊರತು ಯಾರ ಒತ್ತಡದಿಂದ ಅಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು , ಲವ್ ಜಿಹಾದ್ ಬಗ್ಗೆ ಚರ್ಚೆಯಾಗುತ್ತಿದ್ದು ಇದು ಅನಗತ್ಯ . ಲವ್ ಜಿಹಾದ್ ಎಂಬುವುದು ಇಸ್ಲಾಂ ಧರ್ಮದಲ್ಲಿ ಇಲ್ಲ. ಇದು ಸಂಘ ಪರಿವಾರದವರ ಸೃಷ್ಟಿಯಾಗಿದೆ. ಬಾಬ್ರಿ ಮಸೀದಿ ವಿವಾದದ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ತೀರ್ಪು ನೀಡಿದಾಗಲೂ ಯಾವುದೇ ಮುಸಲ್ಮಾನ ತಕರಾರು ಎತ್ತದೆ ತೀರ್ಪನ್ನು ಗೌರವಿಸಿರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಎಸ್.ಡಿ.ಪಿ.ಐ. ಯನ್ನು ನಿಷೇಧ ಮಾಡುತ್ತೇವೆಂದು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಇದುವರೆಗೆ ನಿಷೇಧ ಮಾಡಲಿಲ್ಲ. ಆದುದರಿಂದ ಪತ್ರಿಕೆ ಹೇಳಿಕೆಗೆ ಸೀಮಿತವಾಗದೆ ಸ್ವಸ್ಥ ಸಮಾಜದ ಒಳಿತಿಗಾಗಿ ವಿವಾಹಕೋಸ್ಕರ ಮತಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕೆಂದು ಟಿ.ಎಂ.ಶಾಹೀದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Sponsors

Related Articles

Leave a Reply

Your email address will not be published. Required fields are marked *

Back to top button