ಟಿ.ಎಮ್.ಶಹೀದ್ ರವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮ – ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ…
![](wp-content/uploads/2021/01/4c945c61-db29-46fa-8be0-c0ab09b8d244-780x470.webp)
ಸುಳ್ಯ :ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್.ಶಹೀದ್ ರವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮದ ಪ್ರಯುಕ್ತ ಸುಳ್ಯ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಟಿ.ಎಮ್.ಶಹೀದ್ ರವರು ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಳ್ಯ ಗೌಡರ ಯುವ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಹಾರ ಹಾಕಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಕರುಣಾಕರ, ಕರ್ನಾಟಕ ಸರ್ಕಾರದ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್ ,ಸದಾನಂದ ಮಾವಜಿ,ಮುಸ್ತಫಾ ಸುಳ್ಯ ,ದಿನೇಶ್ ಮಡ್ತಿಲ,ಪಿ.ಎ.ಮಹಮದ್ ಸುಳ್ಯ ,ಶರೀಫ್ ಕಂಠಿ,ಅಶ್ರಫ್ ಗುಂಡಿ,ಟಿ.ಎಮ್.ಜಾವೇದ್ ತೆಕ್ಕಿಲ್, ಸಿದ್ದೀಕ್ ಕೊಕ್ಕೊ, ಮುರಳಿ , ರಿಯಾಜ್ ಕಟ್ಟೆಕಾರ್ , ಅಬ್ದುಲ್ ಮಜೀದ್, ಹನೀಫ್, ಮುಂತಾದವರು ಉಪಸ್ಥಿತರಿದ್ದರು .