ದೊಡ್ಡತೋಟ – ಮರ್ಕಂಜ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಪುನರಾರಂಭಿಸಲು ಮನವಿ…

ಸುಳ್ಯ: ಸುಳ್ಯ- ದೊಡ್ಡತೋಟ- ಮರ್ಕಂಜ ರಸ್ತೆಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಪುನರಾರಂಭಿಸಲು ಸುಳ್ಯ ಕೆಎಸ್ ಆರ್ ಟಿಸಿ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಲಾಯಿತು.
ಕಳೆದ 15 ವರುಷಗಳಿಂದ ಈ ಮಾರ್ಗದಲ್ಲಿ ಸಂಚಾರ ಸೌಕರ್ಯವಿತ್ತು. ಒಂದು ವರ್ಷದಿಂದ ಕೋವಿಡ್-19 ಕಾರಣದಿಂದ ಈ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಆದುದರಿಂದ ಜನರಿಗೆ ಅನುಕೂಲವಾಗಲು ಸರ್ಕಾರಿ ಬಸ್ಸು ಸಂಚಾರ ಸೌಕರ್ಯವನ್ನು ಕೂಡಲೇ ಪುನರಾರಂಭಿಸಲು ಮನವಿಯಲ್ಲಿ ಬೇಡಿಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ಚಿತ್ತರಂಜನ್ ಕೋಡಿ, ಪ್ರಮುಖರಾದ ಬೆಟ್ಟ ಜಯರಾಮ್ ಭಟ್, ರಾಜರಾಮ್ ಭಟ್ ಬೆಟ್ಟ, ಭವಾನಿ ಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button