ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯಿಂದ ಶಾಸಕರ ಭೇಟಿ…

ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯ ನಿಯೋಗವೊಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರನ್ನು ಇಂದು(ಮಂಗಳವಾರ) ಭೇಟಿಯಾಗಿ ಮುಳುಗಡೆ ರೈತರಿಗೆ ನ್ಯಾಯೋಚಿತ ಪರಿಹಾರ ದೊರಕದೆ ಇರುವ ಬಗ್ಗೆ ಗಮನಸೆಳೆದರು.
ಈ ಸಂದರ್ಭದಲ್ಲಿ ಶಾಸಕರು ಮಂಗಳೂರು ನಗರ ಪಾಲಿಕೆ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರಿಹಾರ ಬಾಕಿ ಇರುವ ರೈತರಿಗೆ ಕೂಡಲೇ ಪರಿಹಾರವನ್ನು ಒದಗಿಸುವಂತೆ ಸೂಚಿಸಿದರು. ನಿಯೋಗದಲ್ಲಿ ಶ್ರೀಕಾಂತ್ ಶೆಟ್ಟಿ ಸಂಕೇಶ, ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಮಣ್ಯ ಭಟ್, ಪಿ ಸುದೇಶ್ ಮಯ್ಯ, ವಾಸುದೇವರಾವ್, ರಾಮಚಂದ್ರರಾವ್, ಹೇಮಲತಾ ಧನಂಜಯ ಶೆಟ್ಟಿ, ನರೇಶ್ ಹೊಳ್ಳ ಮೊದಲಾದವರಿದ್ದರು.
ವರತೆ ಪ್ರದೇಶದ ನ್ಯಾಯೋಚಿತ ಸೂಕ್ತ ಪರಿಹಾರಕ್ಕಾಗಿ ಕಂದಾಯ ಸಚಿವ ಆರ್ ಅಶೋಕರನ್ನು ಭೇಟಿ ಮಾಡಿ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ರೈತರ ಹಿತಾಸಕ್ತಿ ಕಾಪಾಡುವುದಾಗಿಯೂ ಶಾಸಕರು ಭರವಸೆ ನೀಡಿದರು.

Sponsors

Related Articles

Leave a Reply

Your email address will not be published. Required fields are marked *

Back to top button