ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯ ಆಹ್ವಾನ ಪತ್ರ ಬಿಡುಗಡೆ….

ಬಂಟ್ವಾಳ: ಶ್ರೀ ಯೋಗನಿ ಪತಂಜಲಿ ಪ್ರತಿಷ್ಠಾನ (ರಿ) ಮಂಗಳೂರು, ಬಂಟ್ವಾಳ ಘಟಕ ಆಶ್ರಯದಲ್ಲಿ ಅ. 5,6ರಂದು ಬಿ.ಸಿ.ರೋಡ್ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯ ಆಹ್ವಾನ ಪತ್ರವನ್ನು ಸೆ. 24ರಂದು ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಯೋಗ ಸ್ಪರ್ಧೆ ಆಯೋಗ ಸಮಿತಿ ಗೌರವ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಬಿಡುಗಡೆ ಮಾಡಿದರು. ಪ್ರತಿಷ್ಠಾನ ಮಂಗಳೂರು ಅಧ್ಯಕ್ಷ ಡಾ| ರಘುವೀರ ಅವಧಾನಿ, ಸಮಿತಿ ಅಧ್ಯಕ್ಷ ಡಾ| ಶಿವಪ್ರಸಾದ್ ಶೆಟ್ಟಿ, ವಿವಿಧ ಸಮಿತಿ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಪ್ರಸಾದ್ ಕುಮಾರ್ ಬಿ.ಸಿ.ರೋಡ್, ಸುರೇಶ್ ನಾಯಕ್ ಬಿ.ಸಿ.ರೋಡ್, ಡಾ| ಸುಬ್ರಹ್ಮಣ್ಯ ಭಟ್ ಟಿ. ಮೊಗರ್ನಾಡು, ಮಂಜುನಾಥ, ಡಾ| ಬಾಲಕೃಷ್ಣ ಕೆ. ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button