ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ವೀರ ರಾಣಿ ಅಬ್ಬಕ್ಕ ಹೆಸರು – ಸುರತ್ಕಲ್ ಮೇಲ್ಸೇತುವೆಯಲ್ಲಿ ಭಗತ್ ಸಿಂಗ್ ಹೆಸರಿನ ಬ್ಯಾನರ್…

ಮಂಗಳೂರು: ಬುಧವಾರ ತಡರಾತ್ರಿ ಸುರತ್ಕಲ್ ಮೇಲ್ಸೇತುವೆ ‘ಭಗತ್ ಸಿಂಗ್ ಮೇಲ್ಸೇತುವೆ ಸುರತ್ಕಲ್’ ಎಂಬ ಹೆಸರಿನ ಬ್ಯಾನರ್ ಹಾಕಲಾಗಿದೆ. ಈ ಹಿಂದೆ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ವೀರ ರಾಣಿ ಅಬ್ಬಕ್ಕ ಹೆಸರು ಬರೆಯಲಾಗಿತ್ತು ಹಾಗೂ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ವೀರ ಸಾವರ್ಕರ್ ಹೆಸರಿನ ಬ್ಯಾನರ್ ಹಾಕಲಾಗಿತ್ತು.

ಪಂಪ್ ವೆಲ್ ಹಾಗೂ ತೊಕ್ಕೊಟ್ಟು ಮೆಲ್ಸೇತುವೆಗಳಿಗೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸುರತ್ಕಲ್ ಮೆಲ್ಸೇತುವೆಯಲ್ಲೂ ಈ ಬ್ಯಾನರ್ ಹಾಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

Sponsors

Related Articles

Leave a Reply

Your email address will not be published. Required fields are marked *

Back to top button