ಭಾನುವಾರ – ದ.ಕ.ಚುಟುಕು ಸಮ್ಮೇಳನ ಉದ್ಘಾಟನೆ…

ಉಡುಪಿ: ಅಖಂಡ ದಕ್ಷಿಣ ಕನ್ನಡ ಜಿಲ್ಲಾ ಕಚುಸಾಪ ಚುಟುಕು ಸಾಹಿತ್ಯ ದ್ವಿತೀಯ ಸಮ್ಮೇಳನದ ಉದ್ಘಾಟನೆ ರಾಜಾಂಗಣ ದಲ್ಲಿ ಭಾನುವಾರ ಮಧ್ಯಾಹ್ನ ಜರುಗಲಿದೆ.
ಬೆಳಿಗ್ಗೆ ೯ ರಿಂದ ಕಾಸರಗೋಡು ಕಚುಸಾಪ ಅಧ್ಯಕ್ಷರಾದ‌ ಡಾ. ವಾಣಿಶ್ರೀ ತಂಡದವರಿಂದ ನೃತ್ಯ ವೈಭವ, ಸಂಗೀತ ಸಂಭ್ರಮ ಜರುಗಲಿದ್ದು ೫೭ ಕಲಾವಿಧರು ಪಾಲ್ಗೊಳ್ಳುವರು. ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ, ಹಿರಿಯ ಚಿಂತಕ,ನಿವೃತ್ತ ಪ್ರಾಧ್ಯಾಪಕ ಜಿ.ಯು.ನಾಯಕ ಆಯ್ಕೆಯಾಗಿದ್ದಾರೆ.
ಚುಟುಕು ವಾಚನ ಗೋಷ್ಟಿ, ಸಂಜೆ ೪ ಗಂಟೆಗೆ ಪರ್ಯಾಯ ಕೃಷ್ಣಮಠದ ಶ್ರೀಪಾದ ಸಾನಿಧ್ಯದಲ್ಲಿ ನಲ್ವತ್ತು ಅರ್ಹ ದಂಪತಿಗಳಿಗೆ ತಲಾ ಹತ್ತು ಪುಸ್ತಕ ದಾನ ಸಮಾರಂಭವನ್ನು ಕಸಾಪ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸುವರು. ಹಿರಿಯ ಚಿಂತಕರಾದ ವಿಶ್ವನಾಥ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸುವರು, ಚುಟುಕು ವಾಚನಾಸಕ್ತರು, ಸಾಹಿತ್ಯಾಸಕ್ತ ಅರ್ಹ ದಂಪತಿಗಳು 9482181305 ಗೆ ಕರೆ ಮಾಡಿ ಹೆಸರು ನೋಂದಾಯಿಸುವಂತೆ ಜಿಲ್ಲಾ ಉಪಾಧ್ಯಕ್ಷ ಎನ್.ರಾಜು ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Back to top button